ಕುಂದಾಪುರ(ವಿಶ್ವಕನ್ನಡಿಗ ನ್ಯೂಸ್): SJM ಕುಂದಾಪುರ ರೇಂಜ್ ಹಮ್ಮಿಕೊಂಡ ಭರವಸೆಯ ಚಿಗುರು ಎಂಬ ಪ್ರತಿಭೆಗಳ ಸಂಗಮ ಪ್ರತಿಭಾ ಸಂಗಮ 13/11/2022 ರಂದು ಕೋಡಿ ಈದ್ಗಾ ಮೈದಾನದಲ್ಲಿ ನಾಲ್ಕು ವೇದಿಕೆಗಳಲ್ಲಿ 25 ರಷ್ಟು ಮದರಸದ 360 ರಷ್ಟು ಪ್ರತಿಭೆಗಳ 90 ರಷ್ಟು ಸ್ಪರ್ಧೆ ಬಹಳಷ್ಟು ಅಚ್ಚುಕಟ್ಟಾಗಿ ನಡೆಯಿತು.
ಮಅ್ದನುಲ್ ಇಸ್ಲಾಂ ಮದರಸ ಕೋಡಿ ಕೋಟೆ ಪ್ರಥಮ ಸ್ಥಾನವನ್ನು ಪಡೆಯಿತು. ಹಯಾತುಲ್ ಇಸ್ಲಾಂ ಮದರಸ ಕೋಡಿ ದ್ವಿತೀಯ ಸ್ಥಾನವನ್ನು ಪಡೆಯಿತು. ಹಯಾತುಲ್ ಇಸ್ಲಾಂ ಮದರಸ ಪಡುಕೆರೆ ತೃತೀಯ ಸ್ಥಾನವನ್ನು ಪಡೆಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ ಕೋಡಿ ಮಸೀದಿ ಅಧ್ಯಕ್ಷರಾದ ಮುಸ್ತಫಾಕ ಹಾಜರಿದ್ದರು. ಅಶ್ರಫ್ ಮುಸ್ಲಿಯಾರ್ ಮೂಡುಗೋಪಾಡಿ ( SJM ಕುಂದಾಪುರ ರೇಂಜ್ ಕಾರ್ಯದರ್ಶಿ ) ಸ್ವಾಗತಿಸಿದರು, ಕುಂದಾಪುರ ರೇಂಜ್ ಅಧ್ಯಕ್ಷರಾದ ಅಮೀರ್ ಅಹ್ಸನಿ ಅಧ್ಯಕ್ಷತೆ ವಹಿಸಿದರು.
MJM ಕೋಡಿ ಮುದರ್ರಿಸ್ ಸುಲೈಮಾನ್ ಫಾಳಿಲಿ ಉದ್ಘಾಟನೆಗೈದರು. ಜಿಲ್ಲಾ ಮಟ್ಟದ ಕಾರ್ಯಕ್ರಮ ಕಾಪು ಮಜೂರಿನಲ್ಲಿ ನಡೆಯಲಿದೆ ಆ ಕಾರ್ಯಕ್ರಮಕ್ಕೆ ಭಾಗವಹಿಸುವ ಹಾಗೂ ಕೋಡಿಯ ಕಾರ್ಯಕ್ರಮದ ಯಶಸ್ವಿಗೆ ಕಾರಣರಾದ ಎಲ್ಲರಿಗೂ ಅಬೂಬಕ್ಕರ್ ಫಾಳಿಲಿ (ಪ್ರತಿಭಾ ಸಂಗಮ ಕನ್ವೀನರ್) ಧನ್ಯವಾದವಿತ್ತರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.