ದೆಹಲಿ (ವಿಶ್ವ ಕನ್ನಡಿಗ ನ್ಯೂಸ್) : ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕೊಲೆ ಬೆದರಿಕೆ ಸಂದೇಶ ಬಂದಿದ್ದು, ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಡಿ ಕಂಪನಿಯು ಪ್ರಧಾನಿ ಹತ್ಯೆಗೆ ಇಬ್ಬರನ್ನು ನೇಮಿಸಿರುವುದು ಆಡಿಯೋ ಕ್ಲಿಪ್ ಬಹಿರಂಗಪಡಿಸಿದೆ. ಮುಂಬೈ ಪೊಲೀಸ್ ಟ್ರಾಫಿಕ್ ವಿಭಾಗದ ವಾಟ್ಸಾಪ್ ಸಂಖ್ಯೆಗೆ ಬೆದರಿಕೆ ಸಂದೇಶ ಬಂದಿದೆ.
ಪ್ರಧಾನಿಯನ್ನು ಹತ್ಯೆ ಮಾಡಲು ಹಂತಕರಾದ ಮುಸ್ತಫಾ ಅಹ್ಮದ್ ಮತ್ತು ನವಾಜ್ ಅವರನ್ನು ಕಳುಹಿಸಲಾಗಿದೆ ಎಂದು ಹಿಂದಿಯಲ್ಲಿ ಬೆದರಿಕೆ ಸಂದೇಶವಿದೆ. ಮೋದಿ ವಿರುದ್ಧ ಕೊಲೆ ಬೆದರಿಕೆ ಸಂದೇಶ ಬಂದ ನಂತರ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಮುಂಬೈ ಪೊಲೀಸರ ಅಪರಾಧ ವಿಭಾಗವು ತನಿಖೆಯನ್ನು ವಹಿಸಿಕೊಂಡಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.