ಬೆಳ್ಳಾರೆ(ವಿಶ್ವಕನ್ನಡಿಗ ನ್ಯೂಸ್): ತಾಲೂಕು ಪಂಚಾಯತ್ ಸುಳ್ಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸುಳ್ಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಬೆಳ್ಳಾರೆಯಲ್ಲಿ ನಡೆದ ಸುಳ್ಯ ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟ ನಡೆಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ತೆಕ್ಕಿಲ್ ಪ್ರತಿಷ್ಟಾನದ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಮುಖ್ಯ ಅತಿಥಿಗಳ ನೆಲೆಯಲ್ಲಿ ಮಾತನಾಡಿ ಗ್ರಾಮೀಣ ಪ್ರತಿಭೆಗಳನ್ನ ಗುರುತಿಸಲು ಇಂತಹ ಕ್ರೀಡಾ ಕೂಟಗಳು ಅಗತ್ಯ ಸುಳ್ಯದ ಅಧಿಕಾರಿ ವರ್ಗ ಆಡಳಿತ ವರ್ಗ ಒಳ್ಳೆಯ ರೀತಿಯಲ್ಲಿ ಜನಪರವಾಗಿ ದುಡಿಯುತ್ತಿದ್ದು ಎಲ್ಲಾ ರಂಗದಲ್ಲೂ ಸುಳ್ಯ ಹೆಸರುವಾಸಿಯಾಗಿದೆ ಎಂದರು ಇಂತಹ ಗ್ರಾಮೀಣ ಕ್ರೀಡಾಕೂಟಿದಿಂದ ಗ್ರಾಮೀಣ ಪ್ರತಿಭೆಗಳಿಗೆ ತನ್ನ ಸಾಮರ್ಥ್ಯವನ್ನು ತೊರ್ಪಡಿಸಲು ಅವಕಾಶ ಆಗಿದೆ ಮುಂದೆ ಕೂಡ ಇಂತಹ ಕ್ರೀಡಾಕೂಟಕ್ಕೆ ಸಹಕರಿಸುವ ಎಲ್ಲರೂ ಕೈಜೋಡಿಸಲು ಕರೆ ನೀಡಿ ಸಮಾರಂಭಕ್ಕೆ ಶುಭ ಕೋರಿದರು.
ಸಮಾರಂಭ ವನ್ನು ಬೆಳ್ಳಾರೆ ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀನಾಥ್ ಕ್ರೀಡಾ ಕೂಟವನ್ನು ಉದ್ಘಾಟಿಸಿದರು, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಶೇಖರ ಪನ್ನೆ ಅಧ್ಯಕ್ಷತೆ ವಹಿಸಿದರು, ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣ ಅಧಿಕಾರಿಎಸ್ ಪಿ ಮಹದೇವ್, ವೀಣಾ ಎಂ ಟಿ, ಉಮಾಕುಮಾರಿ, ಸೂಫಿ ಪೆರಾಜೆ, ಮಾಯಿಲಪ್ಪ, ಮಾಧವ ಗೌಡ, ಜಿ ಕೆ ಹಮೀದ್ ಗೂನಡ್ಕ ಮೊದಲಾದವರು ಭಾಗವಹಿಸಿದರು ಸುಳ್ಯ ತಾಲ್ಲೂಕ್ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಭವಾನಿಶಂಕರ್ ಸ್ವಾಗತಿಸಿ ಗ್ರಾಮೀಣ ಕ್ರೀಡಾ ಕೂಟದ ನೋಡೆಲ್ ಅಧಿಕಾರಿ ದೇವರಾಜ್ ಮುತ್ಲಾಜೆ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.