(www.vknews.in)ಇತ್ತೀಚಿನ ದಿನಗಳಲ್ಲಿ ದ.ಕ ಜಿಲ್ಲೆಯ ಅಪರಾಧ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
ಅದರಲ್ಲೂ ಮುಸ್ಲಿಂ ಸಮುದಾಯವನ್ನು ಗುರಿಯಾಗಿಟ್ಡು ಗುಂಪು ಹಲ್ಲೆಗಳು,ಕೊಲೆಗಳು ವಿಜ್ರಂಬಿಸುತ್ತಿದೆ. ಅಪರಾಧಿಗಳ ಮೇಲೆ ನೆಪ ಮಾತ್ರಕ್ಕೆ ದುರ್ಬಲ ಕೇಸು ದಾಖಲಿಸಿ ಠಾಣೆಯಿಂದಲೇ ಜಾಮೀನು ನೀಡಿ ಬಿಡುಗಡೆ ಗೊಳಿಸಲಾಗುತ್ತಿದೆ. ಇದರ ಪರಿಣಾಮ ಅಕ್ರಮಕೋರರು ಮತ್ತಷ್ಟು ಭಯೋತ್ಪಾಧನಾ ಕೃತ್ಯಗಳನ್ನು ಎಸಗಲು ಧೈರ್ಯ ತೋರುತ್ತಾರೆ. ಸುರತ್ಕಲ್ ನ ಆಮಾಯಕ ಜಲೀಲ್ ಎಂಬವರ ಬರ್ಬರ ಕೊಲೆ ಇದಕ್ಕೆ ತಾಜಾ ಉದಾಹರಣೆಯಾಗಿದೆ. ಇನ್ನು ಜಿಲ್ಲೆಯಲ್ಲಿ ನಡೆಯುತ್ತಿರುವ ಅಷ್ಟೂ ಕೊಲೆಗಳ ಹಿಂದೆ ಒಂದೋ ಕೋಮು ವ್ಯಸನ ಅಥವಾ ಗಾಂಜಾ ವ್ಯಸನದ ಛಾಯೆ ಎದ್ದು ಕಾಣುತ್ತಿದೆ. ಇವೆರಡರ ಹಿಂದಿರುವ ಮಾಫಿಯಾಯಗಳನ್ನು ಮಟ್ಟ ಹಾಕುವಲ್ಲಿ ಸರಕಾರ ಮತ್ತು ಪೋಲೀಸ್ ಇಲಾಖೆ ಸೋಲುತ್ತಿದೆ. ಕೋಮು ವ್ಯಸನವನ್ನು ಅಧಿಕಾರದ ವ್ಯಸನ ತಲೆಗೆ ಹತ್ತಿದವರೇ ಪರಿಪೋಷಿಸುತ್ತಿರುವುದರಿಂದ ಪೋಲಿಸ್ ಇಲಾಖೆ ಅದನ್ನು ಮಟ್ಟ ಹಾಕುವುದು ದೂರದ ಮಾತೇ ಸರಿ. ಇನ್ನು ಡ್ರಗ್ಸ್ ಮಾಫಿಯಾಗಳೊಂದಿಗೂ ಜವಾಬ್ದಾರಿಯುತರು ಕೈ ಜೋಡಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಇದೆಲ್ಲದರ ನಡುವೆ ಏನೂ ಮಾಡಲಾಗದ ಸಾರ್ವಜನಿಕರು ಭಯಬೀತರಾಗಿದ್ದಾರೆ. ಸಮಾಜದ ನಾಯಕರು ಜನರಿಗೆ ಸಹನೆಯ ಭೋದನೆಯನ್ನು ನೀಡುವುದಲ್ಲದೇ ಬೇರೆ ನಿರ್ವಾಹ ಇಲ್ಲದಂತಾಗಿದೆ. ಆದರೆ ಜನರ ಸಹನೆಗೂ ಒಂದು ಮಿತಿ ಇದೆ ಎಂಬುದು ಅನುಭವ ಘಟನೆಗಳು ಸಾಕ್ಷಿ ನುಡಿಯುತ್ತಿದೆ. ಒಟ್ಟಾರೆ ಜನಸಾಮಾನ್ಯರ ಸಹನೆಯ ಕಟ್ಟೆಯೊಡೆಯುವ ಮುಂಚೆ ಸರಕಾರ ಮತ್ತು ಪೋಲೀಸ್ ಇಲಾಖೆ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸದೇ ಹೋದರೆ ಅದು ದೇಶವನ್ನು ಅರಾಜಕತೆಯತ್ತ ಕೊಂಡೊಯ್ಯುವುದರಲ್ಲಿ ಸಂಶಯವಿಲ್ಲ. ಹಾಗಾದರೆ ಪಾಪವನ್ನು ಸರಕಾರವೇ ಹೊರ ಬೇಕಾಗುತ್ತದೆ.
*ಎಸ್ ಬಿ ದಾರಿಮಿ ಉಪ್ಪಿನಂಗಡಿ*
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.