(www.vknews.in) ಕಾಟಿಪಳ್ಳ 4ನೇ ಬ್ಲಾಕ್’ನಲ್ಲಿರುವ ಫ್ಯಾನ್ಸಿ/ಫುಟ್ವೆರ್ ಅಂಗಡಿಗೆ ನುಗ್ಗಿ ಮಾಲಕ ಜಲೀಲ್ ರನ್ನು ಪ್ರತ್ಯಕ್ಷದರ್ಶಿಗಳ ಮಾಹಿತಿಯಂತೆ ಇಬ್ಬರು ಹಂತಕರ ತಂಡ ಇರಿದು ಕೊಲೆಗೈದಿದೆ. ಈ ಬಗ್ಗೆ ತೀವ್ರ ಖಂಡನೆಯನ್ನು ವ್ಯಕ್ತಪಡಿಸಿ ಶೀಘ್ರವೇ ಮೂಲ ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಜೆಡಿಎಸ್ ರಾಜ್ಯ ಮುಖಂಡ ಇಕ್ಬಾಲ್ ಮುಲ್ಕಿ ಪೊಲೀಸ್ ಇಲಾಖೆಯನ್ನು ಅಗ್ರಹಿಸಿದ್ದಾರೆ.
ಜಿಲ್ಲೆಯಲ್ಲಿ ಮೂರು ತಿಂಗಳ ಹಿಂದೆ ನಡೆದ ತ್ರಿವಳಿ ಹತ್ಯೆಯ ಬಳಿಕ ಸ್ವಲ್ಪ ಶಾಂತವಾಗಿದ್ದ ಜಿಲ್ಲೆ ಇತ್ತೀಚಿಗೆ ಮತ್ತೇ ಮತೀಯ ಶಕ್ತಿಗಳು ನೈತಿಕ ಪೊಲೀಸ್’ಗಿರಿಯ ಹೆಸರಿನಲ್ಲಿ ಅಮಾಯಕರ ಮೇಲೆ ಹಲ್ಲೆ ನಡೆಸುವ ಮೂಲಕ ಶಾಂತಿಯನ್ನು ಕದಡುವ ಪ್ರಯತ್ನ ನಡೆಸುತ್ತಿತ್ತು. ಈ ಹಲ್ಲೆ ನಡೆಸುತ್ತಿದ್ದ ಸಮಾಜಘಾತಕ ವ್ಯಕ್ತಿಗಳ ವಿರುಧ್ಧ ಕೇವಲ ಸಣ್ಣಪುಟ್ಟ ಸ್ಟೇಷನ್ ಜಾಮೀನು ಸಿಗುವ ಸೆಕ್ಷನ್ ಹಾಕಿ ಬಿಡುಗಡೆ ನಡೆಸಿದ್ದು ಈ ಶಕ್ತಿಗಳ ಮನೋಬಲ ಹೆಚ್ಚಿಸುವಂತೆ ಮಾಡಿ ಒಂದು ರೀತಿಯಲ್ಲಿ ಪ್ರೋತ್ಸಾಹ ನೀಡಿದ್ದು ಅವರು ಕಾಟಿಪಳ್ಳದಲ್ಲಿ ಅಮಾಯಕ ಜಲೀಲ್ ರನ್ನು ಕೊಲೆ ಮಾಡುವ ಮಟ್ಟಿಗೆ ಮುಂದುವರೆಯುವಂತಾಯ್ತು ಎಂದು ಕಿಡಿಕಾರಿದರು.
ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ, ಜಿಲ್ಲೆಯಲ್ಲಿ ಅಹಿತಕರ ಘಟನೆಗಳು ನಡೆಯುತ್ತಿದೆ. ಮತೀಯ ಶಕ್ತಿಗಳಿಂದ ಅಲ್ಲಲ್ಲಿ ಹಲ್ಲೆ, ಉದ್ರೇಕಕಾರಿ ಭಾಷಣಗಳು ಕೇಳುವಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೊಂಬಿ, ಗಲಭೆ ನಡೆಸುವ ಹುನ್ನಾರ ನಡೆಯುತ್ತಿದೆಯೇ ಎಂದು ಭಾಸವಾಗುತ್ತಿದೆ, ಹಾಗಾಗಿ ಪೊಲೀಸ್ ಇಲಾಖೆ ಎಚ್ಚರದಿಂದ್ದಿದ್ದು ಅವರ ಎಲ್ಲಾ ರೀತಿಯ ಷಡ್ಯಂತ್ರಗಳನ್ನು ವಿಫಲಗೊಳಿಸಬೇಕು ಎಂದು ಹೇಳಿದರು.
ಹಾಗೂ ಅವರು ಮೃತರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ಪ್ರಾರ್ಥಿಸುತ್ತಾ, ರಾಜ್ಯ ಸರ್ಕಾರ ಈ ಕೊಲೆಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆಯನ್ನು ಸಿಬಿಐ ಮೂಲಕ ನಡೆಸಬೇಕು ಮತ್ತು ಜಲೀಲ್ ಕುಟುಂಬಕ್ಕೆ ಇಪ್ಪತ್ತೈದು ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಅಗ್ರಹಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.