(www.vknews.in) : ಡಿಸೆಂಬರ್ 18 ಕ್ಕೆ ಕರ್ನಾಟಕ ಕಲ್ಚರಲ್ ಫೌಂಡೇಶನ್ ವತಿಯಿಂದ ಅಬುಧಾಬಿ ನಗರದ ಹೊರವಲಯದ ಉಮ್ಮುಲ್ ಬಸಾತೀನ್ ವಿಹಾರಧಾಮ ದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕುಟುಂಬ ಸಮ್ಮಿಲನ ಕಾರ್ಯಕ್ರಮ ಯಶಸ್ವಿಯಾಗಿ ಪರಿಸಮಾಪ್ತಿಗೊಂಡಿದೆ. ಮಹಬ್ಬ 2022 ಎಂಬ ಶೀರ್ಷಿಕೆಯಡಿಯಲ್ಲಿ ನಡೆದ ಕುಟುಂಬ ಸಮ್ಮಿಲನದಲ್ಲಿ ಸರಿ ಸುಮಾರು ನೂರೈವತ್ತು ಕುಟುಂಬಗಳನ್ನು ಒಳಗೊಂಡು ಸಾವಿರಕ್ಕೂ ಮಿಕ್ಕಿದ ಜನರು ಸಾಕ್ಷಿಯಾದರು.
ಬೆಳಿಗ್ಗೆ 10 ಘಂಟೆಗೆ ಕೆದುಂಬಾಡಿ ಇಬ್ರಾಹಿಂ ಸಖಾಫಿಯವರ ಪ್ರಾರ್ಥನೆಯೊಂದಿಗೆ ಉದ್ಘಾಟನೆಗೊಂಡ ಕಾರ್ಯಕ್ರಮವನ್ನು ಕಬೀರ್ ಬಾಯಂಬಾಡಿ ಸ್ವಾಗತಿಸಿದರು , ಕಾರ್ಯಕ್ರಮವು ರಾತ್ರಿ ಎಂಟು ಘಂಟೆಯವರೆಗೆ ಸಾಂಗವಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಬೆಳಿಗ್ಗೆ ಯುವಕರಿಗೆ, ಮಕ್ಕಳಿಗೆ ಮತ್ತು ಮಹಿಳೆಯರಿಗೆ ವಿವಿಧ ರೀತಿಯ ಒಳಾಂಗಣ ಕ್ರೀಡೆ , ಸಾಂಸ್ಕೃತಿಕ ಕಾರ್ಯಕ್ರಮಗಳು, ಚಿತ್ರ ಕಲೆ, ಮತ್ತು ನಮ್ಮ ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳು ವಿವಿಧ ವೇದಿಕೆಗಳಲ್ಲಿ ನಡೆಯಿತು. ಯುವಕರಿಗೆ ನಮ್ಮಹಳೆಯ ಗ್ರಾಮೀಣ ಆಟೋಟ ಸ್ಪರ್ಧೆಗಳು, ಮಹಿಳೆಯರಿಗೆ ಆಹಾರ ಪಾಕ ಮತ್ತು ಮೆಹಂದಿ ಸ್ಪರ್ಧೆ ಗಳನ್ನೂ ಆಯೋಜಿಸಲಾಗಿತ್ತು.
ಮಧ್ಯಾಹ್ನ ನಂತರದಲ್ಲಿ ಹಗ್ಗ ಜಗ್ಗಾಟ, ಕಬಡ್ಡಿ, ಮಕ್ಕಳ ವಿಭಾಗದ ಆಟೋಟಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. “ಆರೋಗ್ಯ ಸವಾಲು” ಕಾರ್ಯಕ್ರಮದಲ್ಲಿ ಉತ್ತಮ ಆರೋಗ್ಯ ಕಾಪಾಡುವ ಸಲುವಾಗಿ ಎಲ್ಲರಿಗೂ ಪ್ರೇರಣಾ ಶಿಬಿರವನ್ನು ನಡೆಸಿ ಆರೋಗ್ಯಕರ ಸಂದೇಶವನ್ನು ತಲುಪಿಸಲಾಗಿದೆ. ಮೂರು ಹೊತ್ತಿನ ಊಟೋಪಚಾರ, ಫುಡ್ ಕೋರ್ಟ್ ಮಾದರಿಯಲ್ಲಿ ವಿವಿಧ ಖಾದ್ಯ ತಿಂಡಿ ತಿನಿಸುಗಳ ಮತ್ತು ವಿವಿಧ ರೀತಿಯ ಜ್ಯೂಸ್ ಪಾನೀಯಗಳ ಟೆಂಟ್ ಗಳು ಈ ಕಾರ್ಯಕ್ರಮದ ಮತ್ತೊಂದು ಆಕರ್ಷಣೆಯಾಗಿತ್ತು.
ಯು ಎ ಇ ವಿವಿಧ ಪ್ರಾಂತ್ಯಗಳಿಂದ ಕಾರ್ಯಕ್ರಮಕ್ಕೆ ಬಂದ ಅತಿಥಿಗಳನ್ನು ಸಾಂಸ್ಕೃತಿಕ ರೀತಿಯಲ್ಲಿ ದಫ್ಫ್ ಹಾಡುಗಳೊಂದಿಗೆ ಸ್ವೀಕರಿಸಿದ ರೀತಿಯಂತೂ ಎಲ್ಲರ ಮನಸೂರೆಗೊಂಡಿದ್ದು ಅಬುಧಾಬಿ ಝೋನ್ ಗೆ ಆತಿಥ್ಯದ ಹುಮ್ಮಸ್ಸನ್ನು ನೀಡಿತು.
ಸಂಜೆ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಉಲೇಮಾ ನೇತಾರ ಮಾಡವನ ಮುಹಿಯುದ್ದೀನ್ ಬಾಖವಿ ಉಸ್ತಾದ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು ಕಾರ್ಯಕ್ರಮಕ್ಕೆ ಆಧ್ಯಾತ್ಮಿಕ ಮೆರುಗನ್ನು ನೀಡಿತು. ಬ್ಯಾರೀಸ್ ವೆಲ್ಫೇರ್ ಫೋರಮ್ ಅಧ್ಯಕ್ಷರಾದ ಮುಹಮ್ಮದ್ ಅಲಿ ಉಚ್ಚಿಲ, ಕಾರ್ಯದರ್ಶಿ ಸಿ.ಎ ಅಬ್ದುಲ್ಲಾ ಮದುಮೂಲೆ ಸೇರಿದಂತೆ ವಿವಿಧ ಗಣ್ಯ ವ್ಯಕಿಗಳು ಈ ಕಾರ್ಯಕ್ರಮದಲ್ಲಿ ಹಾಜರಿದ್ದು ಶಿಸ್ತು ಬದ್ಧ ಕಾರ್ಯಕ್ರಮದ ಆಯೋಜನೆ ಬಗ್ಗೆ ಪ್ರಶಂಶೆ ವ್ಯಕ್ತಪಡಿಸಿದರು. ಕೊನೆಯಲ್ಲಿ ಕಾರ್ಯಕ್ರಮದ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ಹೆಚ್ಚಿನ ಅಂಕಗಳನ್ನು ಪಡೆದ ತಂಡಕ್ಕೆ ಚಾಂಪಿಯನ್ ಬಹುಮಾನವನ್ನು ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಮೂಸ ಹಾಜಿ ಬಸರ, ಅಬ್ದುಲ್ ಜಲೀಲ್ ನಿಝಮಿ, ಇಬ್ರಾಹಿಂ ಬ್ರೈಟ್ ಮಾರ್ಬಲ್, ಅಬ್ದುಲ್ ಹಮೀದ್ ಸಅದಿ, ಹಸೈನಾರ್ ಅಮಾನಿ, ಹಕೀಮ್ ತುರ್ಕಳಿಕೆ ನವಾಜ್ ಹಾಜಿ ಕೋಟೆಕ್ಕಾರ್ ಉಪಸ್ಥಿತರಿದ್ದರು. ಆಟೋಟ ಸ್ಪರ್ಧೆಗಳ ಸಂಯೋಜಕರಾಗಿ ಉಮ್ಮರ್ ಮಾಸ್ಟರ್ ಸುಳ್ಯ ಸಹಕರಿಸಿದರು. ದನ್ಯವಾದ ಸಮರ್ಪಿಸುವುದರೊಂದಿಗೆ ಕಾರ್ಯಕ್ರಮದ ಯಶಸ್ವಿಯ ಧನ್ಯತಾ ಭಾವದಿಂದ ಕುಟುಂಬ ಸಮ್ಮಿಲನ ಕಾರ್ಯಕ್ರಮ ಕೊನೆಗೊಂಡಿತು. ಶಾಹುಲ್ ಹಮೀದ್ ಸಖಾಫಿ ಸಭಾ ಕಾರ್ಯಕ್ರಮ ನಿರೂಪಿಸಿದರು.ಈ ಕಾರ್ಯಕ್ರಮವು ಕೆಸಿಎಫ್ ಇತಿಹಾಸದಲ್ಲಿಯೇ ಒಂದು ಮೈಲುಗಲ್ಲು ಎಂದು ಬಣ್ಣಿಸಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.