ಮಂಗಳೂರು (www.vknews.in) : ಇಲ್ಲಿನ ಬೆಂಗರೆ ವಲಯ ವ್ಯಾಪ್ತಿಯ ಬೆಂಗರೆ ನವೀಕ್ರತ ಜನತಾದಳ ಕಛೇರಿಗೆ ಭೇಟಿ ನೀಡಿದ ಮಂಗಳೂರು ದಕ್ಷಿಣ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ಪಕ್ಷದ ಕಾರ್ಯಕರ್ತರೊಂದಿಗೆ ಸಮಾಲೋಚನೆ ಮಾಡಿದರು.
ಬೆಂಗರೆ ಜೆಡಿಎಸ್ ವಲಯ ಅಧ್ಯಕ್ಷ ಲತೀಫ್ ಬೆಂಗ್ರೆ ಹಾಗೂ ಪ್ರ.ಕಾರ್ಯದರ್ಶಿ ಮುಹಮ್ಮದ್ ಬೆಂಗರೆ ಇವರ ನೇತ್ರತ್ವದಲ್ಲಿ ಜೆಡಿಎಸ್ ಮಂಗಳೂರು ದಕ್ಷಿಣ ಕ್ಷೇತ್ರ ಬೆಂಗರೆ ವಲಯದ ಸಭೆ ನಡೆಯಿತು. ಜೆಡಿಎಸ್ ರಾಜ್ಯ ಸಂಘಟಣಾ ಕಾರ್ಯದರ್ಶಿ ಝಮೀರ್ ಶಾ ಮಾತನಾಡಿ , ಪಕ್ಷದ ಯೋಜನೆಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿ ಮುಂದಿನ ಚುನಾವಣೆಯಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರ ಅಭ್ಯರ್ಥಿ ಜೆಡಿಎಸ್ ಅಭ್ಯರ್ಥಿ ಡಾ ಸುಮತಿ ಹೆಗ್ಡೆ ಯವರನ್ನು ಹೆಚ್ಚಿನ ಮತಗಳಿಂದ ವಿಜಯಿಯಾಗಲು ಪ್ರಯತ್ನಪಡಬೇಕಾಗಿದೆ ಎಂದರು.
ಜೆಡಿಎಸ್ ರಾಜ್ಯ ಮೀನುಗಾರಿಕಾ ಘಟಕದ ಅಧ್ಯಕ್ಷರಾದ ರತ್ನಾಕರ ಸುವರ್ಣ ಜೆಡಿಎಸ್ ಅಭ್ಯರ್ಥಿಗೆ ಶುಭ ಹಾರೈಸಿದರು. ಮಂಗಳೂರು ದಕ್ಷಿಣ ಕ್ಷೇತ್ರ ಅಧ್ಯಕ್ಷರಾದ ಡಾ ಸುಮತಿ ಹೆಗ್ಡೆ ಯವರು ಮಾತನಾಡಿ ಮುಂದಿನ ಚುನಾವಣೆಯಲ್ಲಿ ವಿಜಯಿಯಾದರೆ ಕ್ಷೇತ್ರದ ಸರ್ವಾಂಗೀನ ಅಭಿವ್ರದ್ಧಿಪಡಿಸುವುದಾಗಿ ಹೇಳಿದರು.
ಈ ಸಂಧರ್ಭ ನವೀಕ್ರತ ಜೆಡಿಎಸ್ ಕಛೇರಿಯನ್ನು ಮಂಗಳೂರು ದಕ್ಷಿಣ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ಉಧ್ಛಾಟಿಸಿದರು.ಈ ಸಂಧರ್ಭ ಜೆಡಿಎಸ್ ನೇತಾರರಾದ ಲತೀಫ್ ಶಿವಭಾಗ್ , ಅಲ್ತಾಫ್ ತುಂಬೆ , ಮಹಿಳಾ ಘಟಕದ ಕವಿತಾ ಉಪಸ್ಥಿತರಿದ್ದರು. ಬೆಂಗರೆ ವ್ಯಾಪ್ತಿಯ ಹಲವು ಬೇರೆ ಪಕ್ಷದ ಕಾರ್ಯಕರ್ತರು ಜೆಡಿಎಸ್ ಕಾರ್ಯಕ್ರಮಗಳನ್ನು ಮೆಚ್ಚಿ ಡಾ.ಸುಮತಿ ಹೆಗ್ಡೆ ನೇತ್ರತ್ವದಲ್ಲಿ ಪಕ್ಷ ಸೇರ್ಪಡೆಗೊಂಡರು . ಬೆಂಗರೆ ಪರಿಸರದ ನಾಗರಿಕರು, ಪಕ್ಷದ ಕಾರ್ಯಕರ್ತರೂ ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.