ಕೇರಳ (ವಿಶ್ವ ಕನ್ನಡಿಗ ನ್ಯೂಸ್) : ಮದುವೆಯ ಹಿಂದಿನ ದಿನ ವರ ನಾಪತ್ತೆಯಾಗಿದಾನೆ. ಇದರನ್ನು ಗೊಂದಲದಲ್ಲಿ ಕುಟುಂಬಕ್ಕೆ ಸಂತಸವಾಗಿದೆ. ಕಾರಣ ಮರುದಿನ, ಈ ಹಿಂದೆ ಏರ್ಪಡಿಸಿದ್ದ ಸಮಯದಲ್ಲೇ ಮತ್ತೊಬ್ಬ ಯುವಕ ಯುವತಿಯನ್ನು ನಿಕಾಹ್ ಮಾಡಿಕೊಂಡಿದ್ದಾರೆ.
ಕೇರಳದ ತಾಳಯೋಲಪರಂ ನದ್ವತ್ ನಗರ ಕೋಟೂರಿನಲ್ಲಿ ನಡೆದ ಫಾತಿಮಾ ಶಹನಾಝ್ ಅವರ ಮದುವೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತ ಸುಮೀರ್, ಈ ಹಿಂದೆ ನಿಶ್ಚಯಿಸಿದ್ದ ವರ ಬಾರದೆ ಇರುವುದು ತಿಳಿದು ಫಾತಿಮಾ ಅವರನ್ನು ವಿವಾಹವಾಗಿದ್ದಾರೆ.
ಭಾನುವಾರದಂದು ಮದುವೆಗೆ ಎಲ್ಲ ಸಿದ್ಧತೆಗಳು ಮುಗಿದಾಗ ತಾಳಯೋಲಪರಂ ಮೂಲದ ವರ ನಾಪತ್ತೆಯಾದ ವಿಷಯ ತಿಳಿಯಿತು. ನದ್ವತ್ ನಗರ ಕೆ.ಕೆ.ಪಿ.ಜೆ. ಸಭಾಂಗಣದಲ್ಲಿ ನಡೆದ ನಿಕಾಹ್ ಅಧ್ಯಕ್ಷತೆಯನ್ನು ಶಹಜಾನ್ ಮೌಲವಿ ವಹಿಸಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.