ಮೈಸೂರು (ವಿಶ್ವ ಕನ್ನಡಿಗ ನ್ಯೂಸ್) ; ಮೈಸೂರಿನ ಚಾಮುಂಡಿ ಬೆಟ್ಟದ ತುದಿಯಲ್ಲಿ ಚಲಿಸುತ್ತಿದ್ದ ಕಾರಿಗೆ ಬೆಂಕಿ ತಗುಲಿದೆ. ಒಟ್ಟಿಗೆ ಬಂದ ವಾಹನಗಳಲ್ಲಿದ್ದವರು ಕಿರುಚುತ್ತಿದ್ದಂತೆ ಕಾರಿನಲ್ಲಿದ್ದವರು ಕೆಳಗಿಳಿದು ತಪ್ಪಿಸಿಕೊಂಡರು. ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ನಿವಾಸಿ ಜೆ ಪ್ರಶಾಂತ್ ಅವರ ಕೆಎ-16-ಎಂ-9003 ಸಂಖ್ಯೆಯ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸಂಬಂಧಿಕರು ಪ್ರಯಾಣಿಸುತ್ತಿದ್ದ ಕಾರನ್ನು ಕೆ.ಜಿ.ಕೊಪ್ಪಲು ನಿವಾಸಿ ಮಹೇಶ್ ಬಿ ಗೌಡ ಚಲಾಯಿಸುತ್ತಿದ್ದರು.
ಹಿಂಬದಿಯಲ್ಲಿದ್ದ ವಾಹನಗಳಲ್ಲಿ ಹೊಗೆ ಏರುತ್ತಿರುವುದನ್ನು ಗಮನಿಸಿದ ಮಹೇಶ್ ಕಾರನ್ನು ನಿಲ್ಲಿಸಿ ಪ್ರಯಾಣಿಕರನ್ನು ಹೊರಗೆ ಕರೆತಂದರು. ಅಷ್ಟೊತ್ತಿಗಾಗಲೇ ಬಾನೆಟ್ ನಿಂದ ಬೆಂಕಿ ಹರಡಲು ಆರಂಭಿಸಿತ್ತು. ಕೆಲವೇ ನಿಮಿಷಗಳಲ್ಲಿ ಕಾರು ಹೊತ್ತಿ ಉರಿಯಿತು. ಮಹೇಶ್ ಅವರು ನೀಡಿದ ದೂರಿನ ಮೇರೆಗೆ ಕೆ.ಆರ್.ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.