ಕಾಸರಗೋಡು (ವಿಶ್ವ ಕನ್ನಡಿಗ ನ್ಯೂಸ್) : ಕಾರಿನಲ್ಲಿ ಸಾಗಿಸುತ್ತಿದ್ದ ಅಪಾರ ಪ್ರಮಾಣದ ಗಾಂಜಾದೊಂದಿಗೆ ಇಬ್ಬರು ಯುವಕರನ್ನು ಅಬಕಾರಿ ಇಲಾಖೆ ಬಂಧಿಸಿದೆ. ಬಂಧಿತರನ್ನು ಇಡುಕ್ಕಿ ಜಿಲ್ಲೆಯ ಶ್ರೀಜಿತ್ (28) ಮತ್ತು ಅನ್ಸರ್ ಅಜೀಜ್ (29) ಎಂದು ಗುರುತಿಸಲಾಗಿದೆ. ಬಂಧಿತರಿಂದ 8.02 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖೆ ನಡೆಸಿದ ದಾಳಿಯಲ್ಲಿ ಈ ತಂಡ ಸಿಕ್ಕಿಬಿದ್ದಿದೆ. ಕೆಎಲ್ 68 ಎ 9960 ಸ್ವಿಫ್ಟ್ ಕಾರಿನಲ್ಲಿ ಕಾಸರಗೋಡಿಗೆ ತೆರಳುತ್ತಿದ್ದ ಇವರಿಬ್ಬರನ್ನು ಕಾರಂತಕ್ಕಾಡ್ ನಲ್ಲಿ ಅಬಕಾರಿ ತಂಡ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಂಜಾವನ್ನು ಕರ್ನಾಟಕದಿಂದ ಖರೀದಿಸಿ ಎರ್ನಾಕುಲಂಗೆ ಸಾಗಿಸಲಾಗಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಕಾಸರಗೋಡು ಅಬಕಾರಿ ಸರ್ಕಲ್ ಇನ್ಸ್ಪೆಕ್ಟರ್ ಟೋನಿ ಎಸ್.ಐಸಾಕ್, ಪ್ರಿವೆಂಟಿವ್ ಆಫೀಸರ್ ಸಿ.ಕೆ.ಅಶ್ರಫ್, ಮಂಜುನಾಥನ್, ಸತೀಶನ್, ನಾಸಿರುದ್ದೀನ್ ಎ.ಕೆ., ಪ್ರಭಾಕರನ್, ಕೃಷ್ಣಪ್ರಿಯಾ ಅವರು ಗಾಂಜಾ ಬೇಟೆ ನಡೆಸಿದ ತಂಡದಲ್ಲಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.