ಮಂಗಳೂರು (www.vknews.in) : ವಿಟ್ಲ ಸಮೀಪದ ಅಡ್ಯನಡ್ಕದಲ್ಲಿ ನುಸ್ರತುಲ್ ಇಸ್ಲಾಮಿಕ್ ಯಂಗ್ಮೆನ್ಸ್ ಅಸೋಸಿಯೇಷನ್ ಆಯೋಜಿಸಿದ್ದ ಶೈಕ್ಷಣಿಕ ಕಾರ್ಯಾಗಾರದಲ್ಲಿ ದಾಂಧಲೆ ನಡೆಸಿದ ಸಂಘಪರಿವಾರದ ನಡೆ ದುರುದ್ದೇಶ ಪ್ರೇರಿತವಾಗಿದೆ.
ಸಮಾಜದಲ್ಲಿ ಎಲ್ಲಾ ಸಮುದಾಯದವರು ಶೈಕ್ಷಣಿಕ ವಾಗಿ ಮುಂದುವರಿಯಬೇಕು ಎಂಬ ಉದ್ದೇಶದಿಂದ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಧಾರ್ಮಿಕ ಬೋಧನೆ ನಡೆಸಿದರು ಎಂಬ ಸುಳ್ಳು ಆರೋಪ ಹೊರಿಸಿ ದಾಂಧಲೆ ನಡೆಸಿರುವುದು ಖಂಡಾನರ್ಹವಾಗಿದೆ. ಪೊಲೀಸರು ಕೂಡ ಸೂಕ್ತ ತನಿಖೆ ನಡೆಸಿ ದೂರು ದಾಖಲಿಸಿಕೊಳ್ಳಬೇಕಾಗಿತು.
ದಾಂಧಲೆ ನಡೆಸಿದವರ ಮೇಲೆ ಕೇಸು ದಾಖಲಿಸದೆ ಕಾರ್ಯಕ್ರಮ ಅಯೋಜಕರ ಮೇಲೆ ಕೇಸು ದಾಖಲಿಸಿ ಸಮಾಜ ಘಾತುಕರಿಗೆ ಪ್ರೇರಣೆ ನೀಡಿದಂತಾಗಿದೆ. ದಾಂಧಲೆ ನಡೆಸಿದ ಕೋಮುಶಕ್ತಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರಗಿಸಬೇಕೆಂದು SKSSF ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಸಮಿತಿಯೂ ಆಗ್ರಹಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.