ನಾಪೋಕ್ಲು (www.vknews.in) : ಕೊಡಗಿನ ಇತಿಹಾಸ ಪ್ರಸಿದ್ಧ ನಾಪೋಕ್ಲು ಸಮೀಪದ ಎಮ್ಮೆಮಾಡು ದರ್ಗಾ ಷರೀಫ್ ನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಅಝ್ರತ್ ಸೂಫೀ ಶಹೀದ್ (ರ.ಅ) ಹಸನ್ ಸಖಾಫ್ ಹಳ್ರಮಿ(ರ.ಅ) ಹಾಗೂ ಇತರ ಮಹಾನುಭಾವರ ಹೆಸರಿನಲ್ಲಿ ಪ್ರತೀ ವರ್ಷ ಆಚರಿಸಿಕೊಂಡು ಬರುತ್ತಿರುವ ಉರೂಸ್ ಸಮಾರಂಭಕ್ಕೆ ಗಣ್ಯರು ಶ್ರದ್ಧಾಭಕ್ತಿಯ ಚಾಲನೆ ನೀಡಿದರು.
ಶುಕ್ರವಾರ ಜುಮಾ ನಮಾಜಿನ ಬಳಿಕ ದಫ್ ಪ್ರದರ್ಶನದೊಂದಿಗೆ ದರ್ಗಾಗೆ ತೆರಳಿದ ಸಮುದಾಯ ಬಾಂಧವರು ಕೇರಳದ ಕೋಝಿಕ್ಕೋಡ್ ಖಾಝಿ ಗಳಾದ ಸಯ್ಯದ್ ಮುಹಮ್ಮದ್ ಕೋಯಾ ಜಮಲುಲ್ಲೈಲಿ ತಂಙಳ್ ನೇತೃತ್ವದಲ್ಲಿ ಮಖಾಂ ಝಿಯಾರತ್ ಹಾಗೂ ವಿಶೇಷ ಪ್ರಾರ್ಥನೆ ನಡೆಯಿತು. ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಪಿ.ಎ.ಅಬೂಬಕ್ಕರ್ ಸಖಾಫಿ ಧ್ವಜಾರೋಹಣ ನೆರವೇರಿಸಿದರು.
ಪ್ರತೀ ವರ್ಷದಂತೆ ಈ ವರ್ಷವೂ ಉರೂಸ್ ಸಮಾರಂಭವನ್ನು ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಲಾಗಿದೆ.ಫೆ.24ಶುಕ್ರವಾರದಿಂದ ಮಾ.3ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.ಸೋಮವಾರ ಮಧ್ಯಾಹ್ನ 12ಗಂಟೆಗೆ ಸರ್ವಧರ್ಮ ಸಮ್ಮೇಳನ ನಡೆಯಲಿದ್ದು. ಈ ಕಾರ್ಯಕ್ರಮದಲ್ಲಿ ಧಾರ್ಮಿಕ ಪಂಡಿತರು, ರಾಜಕೀಯ ನೇತಾರರು,ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.ಜಿಲ್ಲೆ, ಹೊರಜಿಲ್ಲೆಹಾಗೂ ಹೊರರಾಜ್ಯಗಳಿಂದ ಅಧಿಕಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಫೆ.27ಸೋಮವಾರ ಮಸೀದಿಯಲ್ಲಿ ಮೌಲೂದ್ ಪಾರಾಯಣ ನಡೆದ ಬಳಿಕ ಸಂಜೆ 4 ಗಂಟೆಯಿಂದ 6 ಗಂಟೆಯವರೆಗೆ ಭಕ್ತಾದಿಗಳಿಗೆ ಅನ್ನದಾನ ಕಾರ್ಯಕ್ರಮ ನೆರವೇರಲಿದೆ ಎಂದರು.
ಈ ಸಂದರ್ಭ ಕೊಡಗು ಜಿಲ್ಲಾ ನಾಯಿಬ್ ಕಾಝಿ ಶಾದುಲಿ ಫೈಝಿ, ಎಮ್ಮೆಮಾಡು ಜಮಾಅತ್ ಖತೀಬರಾದ ಅಸ್ನವಿ ಮುಹ್ಸಿನ್ ಹುದವಿ, ಸೈಯದ್ ಅಬ್ದುಲ್ ಅಝೀಝ್ ಅಲ್ ಹೈದ್ರೋಸಿ, ಸಯ್ಯದ್ ಸಾಲಿಮ್ ಸಖಾಫಿ ವಲಿಯೋರ,ಇಲ್ಯಾಸ್ ಅಲ್ ಹೈದ್ರೋಸಿ, ಜಮಾಅತ್ ಮಾಜಿ ಅಧ್ಯಕ್ಷರಾದ ಅಬ್ದುಲ್ ಖಾದರ್ ಹಾಜಿ, ಉಮ್ಮರ್ ಮುಸ್ಲಿಯಾರ್, ಮೂಸಾ ಹಾಜಿ ಚಕ್ಕೇರ, ಹಸೈನಾರ್ ಹಾಜಿ ಚಂಬರಂಡ, ಶಾದುಲಿ ಹಾಜಿ ಚಂಬರಂಡ, ಹಂಸ ಮುಸ್ಲಿಯಾರ್, ಪಾಡಿಯಾಣಿ ಜಮಾಅತ್ ಅಧ್ಯಕ್ಷ ಶಾದುಲಿ ಮುಸ್ಲಿಯಾರ್, ಪಳ್ಳಿರಾಣೆ ಜಮಾಅತ್ ಅಧ್ಯಕ್ಷ ಪಿ.ಎ.ಶಾದುಲಿ, ಎಮ್ಮೆಮಾಡು ಜಮಾಅತ್ ಆಡಳಿತ ಮಂಡಳಿ ಪದಾಧಿಕಾರಿಗಳು,ಊರಿನ ಹಿರಿಯರು ಮತ್ತಿತರ ಗಣ್ಯವ್ಯಕ್ತಿಗಳು,ಗ್ರಾಮಸ್ಥರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ವರದಿ :ಝಕರಿಯ ನಾಪೋಕ್ಲು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.