ನನಸಾದ ಶ್ರೀದೇವಿಯ ಕನಸ್ಸು,ಈಕೆ ಗ್ರಾಮೀಣ ಪರಿಸರದ ಬಹುಮುಖ ಪ್ರತಿಭೆ !
ಕುಂದಾಪುರ (ವಿಶ್ವ ಕನ್ನಡಿಗ ನ್ಯೂಸ್ ) :ನಾನೊಬ್ಬ ಸೈನಿಕನಾಗಬೇಕು, ಸೇನೆಗೆ ಸೇರಿ ತಾಯಿ ಭಾರತಾಂಭೆ ಸೇವೆ ಮಾಡಬೇಕು ಎಂಬ ಆಸೆಯನ್ನು ಬಾಲ್ಯದಲ್ಲೇ ಕಂಡಿದ್ದ ಅಪ್ಪಟ್ಟ ಗ್ರಾಮೀಣ ಕುವರಿಯ ಕನಸ್ಸು ಕೊನೆಗೂ ನನಸಾಗಿದೆ.ನವೆಂಬರ್ ತಿಂಗಳಲ್ಲಿ ನಡೆದ ಅಗ್ನಿಪಥ್ ಯೋಜನೆಯಲ್ಲಿ ಅವಕಾಶ ಪಡೆದು ಕಠಿಣ ತರಭೇತಿಯಲ್ಲಿ ತೇರ್ಗಡೆಗೊಂಡು ಮಹಿಳಾ ಮಿಲಿಟರಿ ವಿಭಾಗಕ್ಕೆ ಆಯ್ಕೆಯಾಗಿದ್ದಾಳೆ. ಕರ್ನಾಟಕ ರಾಜ್ಯದಲ್ಲೇ ಆಯ್ಕೆಗೊಂಡ ಏಕೈಕ ಮಹಿಳಾ ಅಭ್ಯರ್ಥಿ ಶ್ರೀದೇವಿ ಎನ್ನುವುದು ಅಚ್ಚರಿಯ ಸಂಗತಿ.
ಶ್ರೀದೇವಿ ಬಹುಮುಖ ಪ್ರತಿಭೆ : ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೊಸಂಗಡಿ ಗ್ರಾಮದ ಶ್ರೀಕಾಂತ್ ಗೊಲ್ಲ ಹಾಗೂ ಶಿಲ್ಪಾ ದಂಪತಿಯ ಪುತ್ರಿ ಬಾಲ್ಯದಲ್ಲೆಯೇ ಬಹಳ ಜಾಣೆ ,ಚುರುಕಿನ ಸ್ವಭಾವದವಳು.ಎಲ್ಲಾದರಲ್ಲೂ ಮುಂದು .,ಆಟ, ಪಾಠಕ್ಕೆ ಎತ್ತಿದ ಕೈ ,ಸಾಂಸ್ಕೃತಿಕ ಚುಟುವಟಿಯಲ್ಲಿ ಇವಳನ್ನು ಮೀರಿಸುವವರು ಯಾರು ಇಲ್ಲ . ಶಾಲಾ -ಕಾಲೇಜು ದಿನಗಳಲ್ಲಿ ಪ್ರತಿಭಾ ಕಾರಂಜಿ ಮೂಲಕ ರಾಜ್ಯ ಮಟ್ಟದಲ್ಲಿ ಗುರುತಿಸಿ ಕೊಂಡವಳು, ಆಟೋಟದಲ್ಲೂ ಅಷ್ಟೇ ಕಬ್ಬಡಿ ,ರಿಲೇಯಲ್ಲಿ ರಾಜ್ಯವನ್ನು ಪ್ರತಿನಿಧಿಸಿದವಳು.ಓದುದುರಲ್ಲಿ ಕ್ಲಾಸ್ ಗೆ ಇವಳೇ ಮೊದಲು ,ಓಡುವುದರಲ್ಲೂ ಅಷ್ಟೇ ,ಎಲ್ಲಾ ಕ್ರೀಡಾ ಕೂಟದಲ್ಲೂ ಭಾಗವಹಿಸಿ ಸೋಲಿಗೆ ಸವಾಲು ಹಾಕುವ ಈಕೆ, ಮನೆಗೆ ಹಿಂದಿರುಗುವಾಗ ಕೈಯಲ್ಲಿ ಶೀಲ್ಡ್ ಕುತ್ತಿಗೆಯಲ್ಲಿ ಮೆಡಲ್ ಗ್ಯಾರಂಟಿ. ಈ ಬಹುಮುಖ ಪ್ರತಿಭೆಗೆ ಡಾನ್ಸ್ ಅಂದರೆ ಪಂಚ ಪ್ರಾಣ.ಪ್ರಸ್ತುತ ವಿವಿಧ ವೇದಿಕೆಯಲ್ಲಿ ಸಮಯ ಸಿಕ್ಕಾಗ ಹೆಜ್ಜೆ ಹಾಕುತ್ತಾಳೆ . ಪ್ರಾಥಮಿಕ ಪ್ರೌಢ ಶಿಕ್ಷಣವನ್ನ ಹುಟ್ಟೂರು ಹೊಸಂಗಡಿಯಲ್ಲೇ ಮುಗಿಸಿದ್ದರೇ ,ಪದವಿ ಶಿಕ್ಷಣಕ್ಕೆ ಕೈ ಬೀಸಿ ಕರೆಯಿತು ಇವಳ ಪ್ರತಿಭೆಯನ್ನು ಗುರುತಿಸಿ ಮೂಡುಬಿದರೆಯ ಆಳ್ವಾಸ್ ಕಾಲೇಜು.ಅಲ್ಲಿಂದ ಇನ್ನಷ್ಟು ಈ ಪ್ರತಿಭೆಗೆ ಪ್ರೋತ್ಸಾಹ ಸಿಕ್ಕಿತ್ತು,ಪಠ್ಯ ,ಕ್ರೀಡೆ ,ಸಾಂಸ್ಕೃತಿಕ,ಎಲ್ಲವೂ ಎಡೆಬಿಡದೇ ಸಾಗಿತ್ತು . ಹೈಸ್ಕೂಲ್ ನಲ್ಲಿಯೇ ಎನ್ ಎಸ್ ಎಸ್ ಗೆ ಸೇರಿ ಸೇವೆ,ಶಿಸ್ತುನ್ನು ಸ್ರಜನಾತ್ಮಕವಾಗಿ ಕಲಿತು ಮುಂದೊಂದು ದಿನ ಸಿಪಾಯಿಯಾಗಲೇಬೇಕೆಂಬ ಛಲ ಇದು ಸಫಲ ಗೊಂಡಿದೆ .
ಈಕೆಯ ಸಾಧನೆ ಸಾಹಸಗಾಥೆಯ ಬಗ್ಗೆ 2016ರಲ್ಲಿ ‘ಕಲಿಕೆಯಲ್ಲೂ ಹಿಂದಿರದ ,ಗ್ರಾಮೀಣ ಪರಿಸರದ ಈ ಬಹುಮುಖ ಪ್ರತಿಭೆ ‘ ಎಂಬ ಶೀರ್ಷಿಕೆಯಡಿಯಲ್ಲಿ ವಿಶ್ವ ಕನ್ನಡಿಗ ನ್ಯೂಸ್ ವಿಶೇಷವಾದ ವರದಿಯನ್ನು ಮಾಡಿತ್ತು. ಉಜ್ವಲ ಭವಿಷ್ಯಕ್ಕಾಗಿ ಶುಭ ಕೋರಿತ್ತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.