ದುಬೈ (www.vknews.in) : ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಮಾಡನ್ನೂರು ವಿದ್ಯಾಸಂಸ್ಥೆ ಪೂಷಕ ಸಮಿತಿ ನೂರುಲ್ ಹುದಾ ಯುಎಇ ರಾಷ್ಟ್ರೀಯ ಸಮಿತಿಯ ಅಧೀನದಲ್ಲಿ ಧಾವತ್ ಇ ಇಫ್ತಾರ್ ಕಾರ್ಯಕ್ರಮವು ಎಪ್ರಿಲ್ 2 ರಂದು ದುಬೈ ಯಲ್ಲಿ ನಡೆಯಲಿದ್ದು ಪ್ರಸಕ್ತ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಅನಾವರಣ ಕಾರ್ಯಕ್ರಮವು ದುಬೈ ಸಮಿತಿಯ ಕೋಶಾಧಿಕಾರಿ ಅಲೀ ಈಶ್ವರಮಂಗಲ ಅವರ ನಿವಾಸದಲ್ಲಿ ನಡೆಯಿತು, ಸೈಯ್ಯದ್ ಆಸ್ಕರ್ ಅಲಿ ತಂಙಳ್ ಅವರು ಜನಾಬ್ ಶೆರೀಫ್ ಕಾವು ಅವರಿಗೆ ಹಸ್ತಾಂತರಿಸುವ ಮೂಲಕ ಆಮಂತ್ರಣ ಪತ್ರಿಕೆ ಅನಾವರಣಗೊಳಿಸಿ ಸರ್ವರ ಸಹಕಾರವನ್ನು ಕೋರಿದರು.
ಕಾರ್ಯಕ್ರಮದ ಕುರಿತು ವಿವರಣೆ ನೀಡಿ ಮಾತನಾಡಿದ ಸ್ವಾಗತ ಸಮಿತಿ ಅಧ್ಯಕ್ಷರಾದ ಜನಾಬ್ ನವಾಝ್ ಬಿಸಿ ರೋಡ್ ಅವರು ದೇರಾ ಅಬ್ಜದ್ ಗ್ರಾಂಡ್ ಹೋಟೆಲ್ ಸಭಾಂಗಣದಲ್ಲಿ ಎಪ್ರಿಲ್ 2 ರಂದು ಅಸರ್ ನಮಾಝಿನ ಬಳಿಕ 5 ಘಂಟೆಗೆ ಆರಂಭವಾಗುವ ಕಾರ್ಯಕ್ರಮಕ್ಕೆ ತನು, ಮನ, ಧನ ಸಹಕಾರದ ಮೂಲಕ ಯಶಸ್ವಿಗೊಳಿಸಲು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಪ್ರಸಿದ್ಧ ವಾಗ್ಮಿ, ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಮಾಡನ್ನೂರು ಪ್ರಾಂಶುಪಾಲ ಅಡ್ವೋಕೇಟ್ ಹನೀಫ್ ಹುದವಿ ಅವರು ಆಗಮಿಸಲಿದ್ದು ಹಲವಾರು ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ ಎಂದು ಸ್ವಾಗತ ಸಮಿತಿ ಚಯರ್ ಮೇನ್ ಜನಾಬ್ ನವಾಝ್ ಬಿಸಿ ರೋಡ್ ಯುಎಇ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಜನಾಬ್ ಶೆರೀಫ್ ಕಾವು, ದುಬೈ ಸಮಿತಿ ಅಧ್ಯಕ್ಷ ಜನಾಬ್ ಅನ್ವರ್ ಮಾಣಿಲ, ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಸೋಂಪಾಡಿ, ಕೋಶಾಧಿಕಾರಿ ಮುಹಮ್ಮದ್ ಪಳ್ಳತ್ತೂರು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಈ ಸಂಧರ್ಭದಲ್ಲಿ ಎಸ್ ಕೆ ಎಸ್ ಎಸ್ ಎಫ್ ಕರ್ನಾಟಕ ಯುಎಇ ಪ್ರಧಾನ ಕಾರ್ಯದರ್ಶಿ ಜನಾಬ್ ಬದ್ರುದ್ದೀನ್ ಹೆಂತಾರ್, ನೂರುಲ್ ಹುದಾ ಯುಎಇ ಧಾರ್ಮಿಕ ಸಲಹೆಗಾರ ಅಬ್ದುಲ್ಲಾ ನಯೀಮಿ, ದುಬೈ ಸಮಿತಿ ಕೋಶಾಧಿಕಾರಿ ಅಲೀ ಈಶ್ವರಮಂಗಲ, ದುಬೈ ಸಮಿತಿ ಪ್ರಧಾನ ಕಾರ್ಯದರ್ಶಿ ನವಾಝ್ ಕಟ್ಟತ್ತಾರ್, ಸ್ವಾಗತ ಸಮಿತಿ ಕಾರ್ಯದರ್ಶಿ ಜಾಬಿರ್ ಬಪ್ಪಲಿಗೆ, ಸೈಯ್ಯದ್ ಆಷಿಕ್ ತಂಙಳ್, ನೂರುಲ್ ಹುದಾ ದುಬೈ ಸಮಿತಿಯ ರಾಫಿ ಮಾಡನ್ನೂರು ಮೊದಲಾದವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಶುಭ ಹಾರೈಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.