(www.vknews.in) ; ಎಚ್.ಐ.ಎಫ್ ಇಂಡಿಯಾ ಮೆಡಿಕಲ್ ಸೆಲ್ ವತಿಯಿಂದ ನೂತನ ಆಂಬುಲೆನ್ಸ್ ನ್ನು ಇಂದೋರೋರಿನ ಉದ್ಯಮಿ ಮೊಹಮ್ಮದ್ ನಯೀಮ್ ಚಾರ, ಏ.ಕೆ ಸಮೂಹದ ನಿರ್ದೇಶಕರ ನಿಯಾಝ್ ಏ.ಕೆ, ಉದ್ಯಮಿ ಭಾಷಾ ಹಸನಬ್ಬ, ನವರು ಎಹ್ಸಾನ್ ಮಸೀದಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉದ್ಘಾಟಿಸಿದರು.
ಮತ್ತೋರ್ವ ಮುಖ್ಯ ಅತಿಥಿ ಬಾವ ವಿಷ್ಮಿಲ್ ನ ನಿರ್ದೇಶಕರು ರಿಯಾಝ್ ಬಾವ, ರವರು ಬಹಳ ವ್ಯವಸ್ಥಿತವಾದ ರೂಪದಲ್ಲಿ ಕೆಲಸ ಮಾಡುತ್ತಿರುವ ಎಚ್.ಐ.ಎಫ್ ಕಾರ್ಯ ನಿಜಕ್ಕೂ ಶ್ಲಾಘನೀಯ ಸಂಸ್ಥೆಯಿಂದ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳು ನಡೆಯಲಿ ಎಂದು ಹಾರೈಸಿದರು.
ಕಳೆದ 10 ವರ್ಷದಿಂದ ಸಮಾಜದ ನಾನಾ ವಿಭಾಗದಲ್ಲಿ ಸಮಾಜಮುಖಿ ಕೆಲಸ ಮಾಡುತ್ತಿರುವ ಎಚ್.ಐ.ಎಫ್ ಇಂಡಿಯಾ ಸಂಸ್ಥೆಯು ನೂತನ ಉಚಿತ ಆಂಬುಲೆನ್ಸ್ ಸೇವಯನ್ನು ಪ್ರಾರಂಭಿಸಿದೆ. ಸಂಸ್ಥೆ ವತಿಯಿಂದ ರೋಗಿಗಳಿಗೆ ವೀಲ್ ಚೇರ್, ವಾಕರ್,ಮೆಡಿಕೇಟೆಡ್ ಕೋಟ್ (ಮಂಚ), ಆಕ್ಸಿಜನ್ ಸಿಲಿಂಡರ್, ಆಕ್ಸಿಜನ್ ಕಾನ್ಸಂಟ್ರೇಟರ್, ಆಕ್ಸಿ ಮೀಟರ್, ಮುಂತಾದಹ ಮೆಡಿಕಲ್ ಉಪಕರಣಗಳನ್ನು ಉಪಯೋಗಿಸಿ ಹಿಂದಿರುಗಿಸುವಂತಹ ಯೋಜನೆಅಡಿಯಲ್ಲಿ ಉಚಿತವಾಗಿ ನೀಡಲಾಗುತ್ತಿದೆ. ಇದಲ್ಲದೆ ವರ್ಷಕ್ಕೆ ಎರಡು ಬಾರಿ ರಕ್ತದಾನ ಶಿಬಿರ, ಅನಾಥ ನಿರ್ಗತಿಕ ಮಕ್ಕಳಿಗೆ ಉಚಿತ ವೈದ್ಯಕೀಯ ಶಿಬಿರಗಳನ್ನು ನಡೆಸುತ್ತಿದೆ.
ಆಂಬುಲೆನ್ಸ್ ಸೇವೆ ಮಂಗಳೂರನ್ನು ಕೇಂದ್ರವಾಗಿಟ್ಟು 50 ಕಿಲೋಮೀಟರ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಎಂದು ಎಚ್.ಐ.ಎಫ್ ಇಂಡಿಯಾದ ರಿಜ್ವಾನ್ ಪಾಂಡೇಶ್ವರ್ ನುಡಿದರು. ಎಚ್.ಐ.ಎಫ್ ಇಂಡಿಯಾ ಅಧ್ಯಕ್ಷ ನಝೀಮ್ ಏ.ಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಎಹ್ಸಾನ್ ಮಸೀದಿಯ ಕತೀಬ್ ಮೌಲಾನ ತಯ್ಯಬ್ ರವರು ದುಆ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಮರ್ಹೂಮ್ ಎಸ್, ಎಂ ಬಶೀರ್ ರವರ ಸೇವೆ ಮತ್ತು ಅವರ ಸಮುದಾಯ ಮೇಲಿರುವ ಕಾಳಜಿಯನ್ನು ನೆನಪಿಸಲಾಯಿತು. ನಝೀಮ್ ಎಸ್ ಎಸ್ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.