(www.vknews.in) ; ಯು.ಟಿ.ಖಾದರ್ ಬಗ್ಗೆ ಇತರ ಪಕ್ಷಗಳಿಗೆ ವಿರೋಧ ಯಾಕೆ ಎಂದು ನಾನು ಹಲವು ಬಾರಿ ಚಿಂತಿಸಿದ್ದಿದೆ, ಯಾಕೆಂದರೆ ಯು.ಟಿ.ಖಾದರ್ ಕಾಂಗ್ರೆಸ್ ಪಕ್ಷದವರಾದರೂ, ಅವರು ಎಲ್ಲಾ ಪಕ್ಷಗಳ ನಾಯಕರನ್ನು, ಕಾರ್ಯಕರ್ತರನ್ನು ಮಾತ್ರವಲ್ಲ, ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಕೂಡ ಗೌರವಿಸುವವರು ಮತ್ತು ಪ್ರೀತಿಸುವವರು, ಹೀಗಿದ್ದರೂ ಆರೋಪಗಳ ಮೇಲೆ ಆರೋಪ ಹೊರಿಸಲಾಗುತ್ತಿದೆ!
ರಾಜಕೀಯ ಎಂಬ ನೆಲೆಯಲ್ಲಿ ಸಹಜವಾಗಿ ಇತರ ಪಕ್ಷಗಳ ಸಿದ್ಧಾಂತ ಅವರಿಗೆ ಒಪ್ಪಿಗೆಯಾಗಬೇಕೆಂದೇನೂ ಇಲ್ಲ, ಆದರೂ ಅವರು ವಿಶಿಷ್ಟ ಸ್ವಭಾವಗುಣಗಳನ್ನು ಅಳವಡಿಸಿಕೊಂಡ ಒಬ್ಬ ಜನಸ್ನೇಹಿ ಜನ ನಾಯಕ ಎನ್ನಬಹುದು, ಪ್ರಬುದ್ಧತೆಯ ರಾಜಕಾರಣಿ. ವಿಧಾನ ಸೌಧದ ಒಳಗೂ ಹೊರಗೂ ಯು.ಟಿ.ಖಾದರ್ ದ್ವೇಷ ಸಾಧನೆ ಮಾಡುವವರಲ್ಲ, ಇತರ ಪಕ್ಷದವರನ್ನು ಕಾಣುವಾಗ ಹಸ್ತದಾನ ಮಾಡಿ ಅವರು ಕುಶಲೋಪರಿ ನಡೆಯುವ ದೃಶ್ಯ ಇದೆಯಲ್ಲ, ನಿಜಕ್ಕೂ ಅದು ಗ್ರೇಟ್
ಚುನಾವಣೆ ಬರುವಾಗ ಯು.ಟಿ. ಖಾದರ್ ವಿರುದ್ಧ ವಿವಿಧ ಆರೋಪಗಳನ್ನು ಮಾಡುವವರನ್ನು ನಾವು ಕಾಣುತ್ತೇವೆ, ನಿಜವಾಗಿ ಆ ಆರೋಪಗಳಲ್ಲಿ ಹುರುಳಿಲ್ಲ ಎಂದು ಸ್ವತಃ ಆರೋಪ ಹೊರಿಸಿದವರಿಗೂ ಚೆನ್ನಾಗಿ ಗೊತ್ತು. ಅಭಿವೃದ್ಧಿ ಆಧಾರದಲ್ಲಿ, ಸರ್ವ ಜನ ಬಾಂಧವರನ್ನು ತಾರತಮ್ಯ ಮಾಡದೆ ಪ್ರೀತಿಯಿಂದ ಕಾಣುವ ದೃಷ್ಟಿಯಿಂದ ಒಬ್ಬ ಅಭ್ಯರ್ಥಿಗೆ ಎಲ್ಲಾ ವರ್ಗದ ಜನರು ಮತ ಹಾಕುವುದಾದರೆ ಅದಕ್ಕೆ ಯು.ಟಿ.ಖಾದರ್ ಗಿಂತ ಮಿಗಿಲಾದ ವ್ಯಕ್ತಿ ಬೇರಿಲ್ಲ ಎಂದು ಎಲ್ಲಾ ರಾಜಕೀಯ ಪಕ್ಷಗಳ ನಾಯಕರ ಮತ್ತು ಕಾರ್ಯಕರ್ತರ ಅಭಿಪ್ರಾಯದ ಆಧಾರದಲ್ಲಿ ಧೈರ್ಯದಿಂದ ಹೇಳಬಹುದು.
ಇಂಥಾ ಮಾದರಿ ಜನ ನಾಯಕ ಮಂಗಳೂರು ವಿಧಾನ ಸಭಾ ಕ್ಷೇತ್ರಕ್ಕೆ ಅಗತ್ಯ ಮತ್ತು ರಾಜ್ಯ ಸರಕಾರದ ಉನ್ನತ ಜವಾಬ್ದಾರಿ ಹೊರಲು ಅಗತ್ಯ!, ನನ್ನ ಕ್ಷೇತ್ರ ಅಲ್ಲದಿದ್ದರೂ ಜನಸಂಪರ್ಕದ ರಾಜಕಾರಣಿ ಎಂಬುದು ಸಂಶಯವಿಲ್ಲ. ಇನ್ನೊಬ್ಬರಿಗೆ ಸಹಾಯ ಮಾಡುವಾಗ ಜಾತಿ ಮತ ಭೇದ ಯಾವುದು ನೋಡದೆ ಕ್ಷೇತ್ರದ ಜನತೆಯ ಮತ್ತೊಮ್ಮೆ ಆಶೀರ್ವಾದ ಮಾಡೇ ಮಾಡುತ್ತಾರೆ.
✍️ ಅನ್ವರ್ ಅಡ್ಯಾರ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.