ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಮನೆಯೊಂದರಲ್ಲಿ ಕಳೆದ ಬುಧವಾರ ತನ್ನ ಪುತ್ರಿಯೊಂದಿಗೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸಮೀಪ ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡಿಯಾಲಗುತ್ತು ಪರಿಸರದಲ್ಲಿ ಈ ಘಟನೆ ನಡೆದಿತ್ತು. ಕೇಶವ ಬಂಧಿತ ಆರೋಪಿ.
ಮಹಿಳೆಯ ಮನೆಯಲ್ಲಿ ಪೊಲೀಸರಿಗೆ ದೊರೆತ ಡೆತ್ನೋಟ್ ಆಧಾರದಲ್ಲಿ ತನಿಖೆ ಮುಂದುವರಿಸಲಾಗಿದ್ದು, ಕೇಶವ ಎಂಬವರನ್ನು ಆತ್ಮಹತ್ಯೆಗೆ ಪ್ರಚೋದನೆ ಆರೋಪದಲ್ಲಿ ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಕಳೆದ ಬುಧವಾರ ವಿಜಯಾ (33) ಅವರು ತನ್ನ ನಾಲ್ಕು ವರ್ಷದ ಪುತ್ರಿ ಶೋಭಿಕಾ ಹಾಗೂ ಇನ್ನೋರ್ವಳು 12 ವರ್ಷದ ಪುತ್ರಿಯೊಂದಿಗೆ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದರು. 12 ವರ್ಷದ ಪುತ್ರಿ ಪಾರಾಗಿದ್ದರು. ವಿಜಯಾ ಮತ್ತು ಶೋಭಿಕಾ ಮೃತಪಟ್ಟಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.