ಮಂಗಳೂರು (www.vknews.in) : ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ದ.ಕ ಜಿಲ್ಲಾ ಅಧ್ಯಕ್ಷರಾದ ಸಿ. ಅಬ್ದುಲಾ ರಹಿಮಾನ್ ಅವರ ನೇತೃತ್ವದಲ್ಲಿ ಪಕ್ಷದ ನಿಯೋಗವೊಂದು ನೂತನವಾಗಿ ಅಧಿಕಾರ ವಹಿಸಿಕೊಂಡ ಮಂಗಳೂರು ನಗರ ಪೋಲೀಸ್ ಆಯುಕ್ತರನ್ನು ಭೇಟಿಯಾಗಿ ಅಭಿನಂದಿಸಿದರು.
ಈ ವೇಳೆ ಮುಂಬರುವ ರಂಝಾನ್ ಸಂದರ್ಭದಲ್ಲಿ ರಾಜ್ಯ ವಿಧಾನ ಸಭಾ ಚುನಾವಣೆ ಕೂಡ ಬರುತ್ತದೆ. ಆದುದರಿಂದ ಎಲ್ಲಾ ಮಸೀದಿಗಳು ಮತ್ತು ಧಾರ್ಮಿಕ ಕೇಂದ್ರಗಳಿಗೆ ಅಗತ್ಯ ರಕ್ಷಣೆಯನ್ನು ನೀಡಬೇಕಾಗಿ ವಿನಂತಿಸಲಾಯಿತು. ರಂಜಾನ್ ತಿಂಗಳ ರಾತ್ರಿ ಪ್ರಾರ್ಥನೆಗಾಗಿ ತೆರಳುವವರಿಗೆ ರಕ್ಷಣೆ ಮತ್ತು ಮುಂಜಾನೆಯ ಅಝಾನ್ ಕರೆಗೆ ಧ್ವನಿವರ್ಧಕ ಬಳಸಲು ಅನುಮತಿ ನೀಡಬೇಕೆಂದು ಕೋರಲಾಯಿತು.
ನಿಯೋಗವು ನಗರದ ಕಾನೂನು ಸುವ್ಯವಸ್ಥೆ ಪರಿಪಾಲನೆ ವಿಚಾರದ ಬಗ್ಗೆ ಅಧಿಕಾರಿಯೊಂದಿಗೆ ಚರ್ಚಿಸಿತು. ನಿಯೋಗದಲ್ಲಿ ರಾಜ್ಯ ಮುಸ್ಲಿಂ ಲೀಗ್ ಸದಸ್ಯ ಎ.ಎಸ್.ಇ. ಕರೀಂ ಕಡಬ, ಮುಂದಾಳುಗಳಾದ ರಿಯಾಝ್ ಹರೇಕಳ ,ಮುಹಮ್ಮದ್ ಬಶೀರ್ ಉಳ್ಳಾಲ್ , ಎಚ್ ಮುಹಮ್ಮದ್ ಇಸ್ಮಾಯಿಲ್ ಹಾಜಿ ,ಮುಹಮ್ಮದ್ ಬಿ.ಎ. ಇದ್ದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.