(ವಿಶ್ವ ಕನ್ನಡಿಗ ನ್ಯೂಸ್) : ಇತ್ತೀಚಿನ ದಿನಗಳಲ್ಲಿ ನಾವು ಎಲ್ಲಾ ಪಕ್ಷಗಳಲ್ಲೂ ಪಕ್ಷಾಂತರ ಮಾಡುವವರನ್ನು ಕಾಣುತ್ತಿದ್ದೇವೆ. ಕಾಲ ಎಷ್ಟು ಕೆಟ್ಟು ಹೋಗಿದೆ ಅಂದರೆ ಇತ್ತೀಚಿನ ದಿನಗಳವರೆಗೆ ಇನ್ನೊಂದು ಪಕ್ಷವನ್ನು ಕೆಟ್ಟ ಶಬ್ದಗಳಿಂದ ಟೀಕಿಸುತ್ತಿದ್ದ ವ್ಯಕ್ತಿ ಅದೇ ಟೀಕಿಸಿದ ಪಕ್ಷಕ್ಕೆ ಸೇರಿ ಆ ಪಕ್ಷವನ್ನು ಹೊಗಳುತ್ತಾರೆ. ಇದನ್ನು ಕಂಡು ಅವರ ಹಿಂದೆ ಜೈಕಾರ ಹಾಕಿ ಕುಣಿಯುವ ನಾವೆಷ್ಟು ಬುದ್ದಿಹೀನರು.. ಸ್ವತಃ ಚಿಂತಿಸಬೇಕಾದ ವಿಷಯವಾಗಿದೆ.
ಪಕ್ಷದ ಹೈಕಮಾಂಡ್, ಕೂಡಾ ಇವರು ಬಂದ ಕೂಡಲೇ ಅವರಿಗೆ ಪಕ್ಷದಿಂದ ಸ್ಪರ್ಧಿಸಲು ಟಿಕೆಟ್ ನೀಡುತ್ತಿದೆ, ಇದೇನು ನ್ಯಾಯ?, ಇಷ್ಟು ವರ್ಷ ಅದೇ ಪಕ್ಷದಲ್ಲಿ ಪಕ್ಷಕ್ಕಾಗಿ ಹಗಳಿರಲು ದುಡಿದ ಕಾರ್ಯಕರ್ತನಿಗೆ ಬೆಲೆ ಇಲ್ಲವೇ. ಈ ರೀತಿಯಾಗಿ ಇತರೇ ಪಕ್ಷಗಳಿಂದ ಬಂದವರಿಗೆ ಟಿಕೆಟ್ ನೀಡಿದರೆ ಅವರು ಗೆದ್ದ ಬಳಿಕ ಮತ್ತೆ ಪಕ್ಷಾಂತ ಮಾಡಲಿಕ್ಕಿಲ್ಲ ಅನ್ನೋದಕ್ಕೆ ಏನು ಗ್ಯಾರಂಟಿ..?.
ನನ್ನ ಅಭಿಪ್ರಾಯದಲ್ಲಿ ಪಕ್ಷಾಂತರ ತಪ್ಪಲ್ಲ. ಎಲ್ಲರಿಗೂ ಸ್ವಂತವಾಗಿ ಯೋಚಿಸಿ ಪಕ್ಷದಲ್ಲಿ ಏನಾದರು ಸರಿ ಕಂಡಿಲ್ಲ ಅಂದಲ್ಲಿ ಪಕ್ಷಾಂತರ ಮಾಡಬಹುದು. ಆದರೆ ಪ್ರತಿಯೊಂದು ಪಕ್ಷವೂ ಪಕ್ಷದಲ್ಲಿ ಒಂದು ನೀತಿ ನಿಯಮಗಳನ್ನು ಮಾಡಬೇಕು. ಯಾರೇ ಪಕ್ಷಕ್ಕೆ ಬಂದರೂ ಅವರು ಕನಿಷ್ಠ ಐದು ವರ್ಷವಾದರೂ ಪಕ್ಷಕ್ಕೆ ಸಾಮಾನ್ಯ ಕಾರ್ಯಕರ್ತನಾಗಿ ದುಡಿಯಬೇಕು. ಈ ರೀತಿಯ ನಿಯಮ ಮಾಡಿದಲ್ಲಿ ಪಕ್ಷಕ್ಕಾಗಿ ದುಡಿದ ವ್ಯಕ್ತಿಗೆ ಟಿಕೆಟ್ ಸಿಗುವುದರಲ್ಲಿ ಅನುಮಾನವಿಲ್ಲ. ಅಲ್ಲದೆ ಈ ವ್ಯಕ್ತಿ ಜಯಗಳಿಸಿದ ಬಳಿಕ ಇನ್ನೊಂದು ಪಕ್ಷಕ್ಕೆ ಮಾರಾಟವಾಗಲಿಕ್ಕೂ ಇಲ್ಲ.
ನನ್ನ ಈ ಅಭಿಪ್ರಾಯ ಓದುಗರಿಗೆ ಸರಿ ಎಂದು ಕಂಡಿರಬಹುದು ಎಂದು ಭಾವಿಸುತ್ತೇನೆ. ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಬಹುದು..
– ಹನೀಶ್, ಪುತ್ತೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.