ಛತ್ತೀಸ್ ಗಢ್ (ವಿಶ್ವ ಕನ್ನಡಿಗ ನ್ಯೂಸ್) : ಅಪಘಾತದಲ್ಲಿ ಸರ್ಗುಜಾದಲ್ಲಿ ಕಾನ್ಸ್ ಟೇಬಲ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಿಧನರಾಗಿದ್ದರು, ಇದೀಗ ಅವರ 5 ವರ್ಷದ ಅವರ ಮಗನನ್ನು ಮಕ್ಕಳ ಕಾನ್ಸ್ಟೇಬಲ್ ಆಗಿ ಪೊಲೀಸ್ ಇಲಾಖೆ ನೇಮಿಸಿದೆ.
ಇತ್ತೀಚೆಗೆ ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟಿದ್ದ ರಾಜ್ ಕುಮಾರ್ ರಾಜವಾಡೆ ಪೊಲೀಸ್ ಠಾಣೆಯಲ್ಲಿ ಪೇದೆಯಾಗಿ ಕೆಲಸ ಮಾಡುತ್ತಿದ್ದರು. ಮರಣದ ನೋವಿನಲ್ಲಿದ್ದ ರಾಜ್ ಕುಮಾರ್ ರಾಜವಾಡೆ ಅವರ ಕುಟುಂಬಕ್ಕೆ ಪೊಲೀಸ್ ಇಲಾಖೆಯ ಆಡಳಿತ ಮಂಡಳಿ ಅನುಕಂಪದ ಆಧಾರದ ಮೇಲೆ ಮೃತರ 5 ವರ್ಷದ ಮಗನಾಗಿರುವ ನಮನ್ ರಾಜವಾಡೆ ಅವರನ್ನು ಮಕ್ಕಳ ಕಾನ್ಸ್ ಟೇಬಲ್ ಆಗಿ ನಿಯೋಜಿಸಿದೆ.
ಇದರ ಬಗ್ಗೆ ಮಾತನಾಡಿರುವ ಪೊಲೀಸ್ ಅಧಿಕಾರಿ ಭಾವನಾ ಗುಪ್ತಾ “ಆಡಳಿತ ಮತ್ತು ಪೊಲೀಸ್ ಪ್ರಧಾನ ಕಚೇರಿಯ ಮಾರ್ಗಸೂಚಿಗಳ ಪ್ರಕಾರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಪಘಾತದಲ್ಲಿ ರಾಜ್ ಕುಮಾರ್ ರಾಜವಾಡೆ ಮೃತಪಟ್ಟಿದ್ದಾರೆ. ಇಂತಹ ಪ್ರಕರಣದಲ್ಲಿ ಕುಟುಂಬದಲ್ಲಿ ಯಾರಾದರೂ 18 ವರ್ಷಕ್ಕಿಂತ ಕೆಳಗಿನ ವಯಸ್ಸಿನವರು ಇದ್ದರೆ, ಅವರನ್ನು ಮಕ್ಕಳ ಕಾನ್ಸ್ ಟೇಬಲ್ ಯನ್ನಾಗಿ ನೇಮಿಸಲಾಗುತ್ತದೆ ಎಂದು ಹೇಳಿದ್ದಾರೆ.
ಯುಕೆಜಿ ಓದುತ್ತಿರುವ ನಮನ್ ರಾಜವಾಡೆ ಅವರನ್ನು ಮಕ್ಕಳ ಕಾನ್ಸ್ ಟೇಬಲ್ ಆಗಿ ನೇಮಿಸಿರುವುದಕ್ಕೆ ಮಾತನಾಡಿರುವ ತಾಯಿ ನೀತು ರಾಜವಾಡೆ “ಪತಿಯ ನಿಧನದಿಂದ ನೊಂದಿದ್ದೇನೆ. ಮಗುವಿಗೆ ಕಾನ್ಸ್ ಟೇಬಲ್ ಹುದ್ದೆ ನೀಡುರುವುದಕ್ಕೆ ಸಮಾಧಾನವಿದೆ ಎಂದಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.