(www.vknews.in) ‘2019 ರಿಂದ 2022 ರವರಗಿನ ಮೂರು ವರ್ಷಗಳ ರಾಜ್ಯದ 700 ಗಾಂಧಿ ಪುರಸ್ಕ್ರತ ಗ್ರಾಮ ಪಂಚಾಯತ್ ಅಧ್ಯಕ್ಷರನ್ನು, ಉಪಾಧ್ಯಾಕ್ಷರನ್ನು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳನ್ನು ಬೆಂಗಳೂರಿನ ಅರಮನೆಯ ತ್ರಿಪುರವಾಸಿನಿ ಕರೆಸಿ ಪ್ರಶಸ್ತಿ ಪ್ರಧಾನ ಮಾಡುವುದಾಗಿ ನಂಬಿಸಿ ಕೇವಲ 200 ಪಂಚಾಯತ್ ಗೆ ಪ್ರಧಾನ ಮಾಡಿ ಉಳಿದವರಿಗೆ ಪ್ರಶಸ್ತಿ ಮತ್ತು ಪ್ರಶಸ್ತಿಪತ್ರ ನೀಡದೆ ಪುಕ್ಕಟೆ ಪ್ರಚಾರಕ್ಕೆ ಮತ್ತು ಚುನಾವಣೆಯ ಉದ್ದೇಶಕ್ಕೆ ರಾಜ್ಯದ ಐದು ಸಾವಿರ ಜನ ಪ್ರತಿನಿಧಿಗಳನ್ನು ಕರೆಸಿ ಅವ್ಯವಸ್ಥೆಯ ಕಾರ್ಯಕ್ರಮ ಸಂಘಟಸಿ ಕೇವಲ 200 ರಷ್ಟು ಪಂಚಾಯತ್ ಗಳ ಅಧ್ಯಕ್ಷರು ಹಾಗೂ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಿಗೆ ಮಾತ್ರ ಗಾಂಧಿ ಪುರಸ್ಕ್ರತ ಪ್ರಶಸ್ತಿಯನ್ನು ನೀಡಿ ಉಳಿದ ಗ್ರಾಮ ಪಂಚಾಯತ್ ಗಳಿಗೆ ಗಾಂಧಿ ಗ್ರಾಮ ಪುರಸ್ಕ್ರತ ಪ್ರಶಸ್ತಿಯನ್ನು ನೀಡದೆ ಅವಮಾನಿಸಿರುವುದು ಸರಕಾರ ಗಾಂಧಿಜಿಯವರಿಗೆ ಮತ್ತು ಪ್ರಶಸ್ತಿ ಪುರಸ್ಕೃತ ಗ್ರಾಮ ಪಂಚಾಯತ್ ಗಳಿಗೆ ಮಾಡಿದ ಅವಮಾನ ಈ ಕಾರ್ಯಕ್ರಮವನ್ನು ಸಂಘಟಿಸಿ ಮುಜುಗರಕ್ಕೊಳಗಾದ ಸರಕಾರ ರಾಜ್ಯದ ಜನತೆಯ ಕ್ಷಮೆ ಕೇಳುವಂತೆ ಕೆಪಿಸಿಸಿ ವಕ್ತಾರ ಟಿ ಎಂ ಶಾಹಿದ್ ತೆಕ್ಕಿಲ್ ಒತ್ತಾಯಿಸಿದ್ದಾರೆ.
ಸರಕಾರ ಚುನಾವಣಾ ತರಾತುರಿಯಲ್ಲಿ ಕೇವಲ ಪ್ರಚಾರಕ್ಕೆ ಮಾತ್ರ ಈ ಒಂದು ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಏರ್ಪಡಿಸಿ ಮುಖ್ಯಮಂತ್ರಿ, ಕೇಂದ್ರ ಸಚಿವರನ್ನು ಆಹ್ವಾನಿಸಿ ಮುಜುಗರಕ್ಕೆ ಒಳಗಾಗಿದೆ ಸರಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿದ್ದು ಇದಕ್ಕೆ ಯಾರು ಹೊಣೆ ಎಂದು ಕೆ.ಪಿ.ಸಿ.ಸಿ.ವಕ್ತಾರ ಟಿ.ಎಂ ಶಹೀದ್ ತೆಕ್ಕಿಲ್ ಸರಕಾರವನ್ನು ಪ್ರಶ್ನಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.