ಎಲಿಮಲೆ(ವಿಶ್ವಕನ್ನಡಿಗ ನ್ಯೂಸ್): ನುಸ್ರತುಲ್ ಇಸ್ಲಾಂ ಅಸೋಸಿಯೇಶನ್ ಎಲಿಮಲೆ ಇದರ ವತಿಯಿಂದ ಮರ್ಹೂಂ ಪಿ.ಟಿ. ಉಸ್ತಾದರ ಆಂಡ್ ಪ್ರಯುಕ್ತ ಉಲಮಾ ಉಮರಾ ಅನುಸ್ಮರಣೆ, ಇಫ್ತಾರ್ ಸಂಗಮ, ಬಡ ಕುಟುಂಬಗಳಿಗೆ ರಮಳಾನ್ ಕಿಟ್ ವಿತರಣೆ,ಧಾರ್ಮಿಕ ವಿಧ್ಯಾಭ್ಯಾಸದಲ್ಲಿ ಪದವಿಗಳಿಸಿದವರಿಗೆ ಸನ್ಮಾನ ,ಬಿಳ್ಕೊಡುಗೆ ಸಮಾರಂಭವು ಎಲಿಮಲೆ ಮಸೀದಿ ವಠಾರದಲ್ಲಿ ಜರುಗಿತು.
ತಹ್ಲೀಲ್ ಸಮರ್ಪಣೆ ಹಾಗೂ ದುವಾ ಪ್ರಾರ್ಥನೆ ಗೆ ಎಲಿಮಲೆ ಮುದರಿಸರಾದ ಜೌಹರ್ ಅಹ್ಸನಿಯವರು ನೇತೃತ್ವ ವಹಿಸಿದರು. ಮಹಮೂದ್ ಸಖಾಫಿಯವರು ಉಲಮಾ ಉಮರಾ ಅನುಸ್ಮರಣಾ ಭಾಷಣಗೈದರು. ಎಲಿಮಲೆಯಲ್ಲಿ ಮುದರಿಸರಾಗಿ ಸೇವೆಗೈದು ತೆರಳುತ್ತಿರುವ ಜೌಹರ್ ಅಹ್ಸನಿಯವರನ್ನು ಸಮಿತಿ ಪರವಾಗಿ ಜಮಾಅತ್ ಉಪಾಧ್ಯಕ್ಷ ಯೂಸುಫ್ ಪಾಣಾಜೆಯವರು ಶಾಲುಹೊದಿಸಿ ಅಭಿನಂದನಾಪತ್ರ ನೀಡಿ ಗೌರವಿಸಿದರು. ಜಮಾಅತಿಗೊಳಪಟ್ಟ ಬಡ ಕುಟುಂಬಗಳಿಗೆ ರಮಳಾನ್ ಕಿಟ್ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಲತೀಫ್ ಹರ್ಲಡ್ಕ ರವರು ಜಮಾಅತಿಗೊಳಪಟ್ಟ ಉಸ್ತಾದರಿಗೆ ಹಾಗೂ ದರ್ಸ್ ವಿಧ್ಯಾರ್ಥಿಗಳಿಗೆ ವಸ್ತ್ರಗಳನ್ನು ವಿತರಿಸಿದರು. ಇದೇ ಸಂಧರ್ಭದಲ್ಲಿ ಧಾರ್ಮಿಕ ವಿಧ್ಯಾಭ್ಯಾಸದಲ್ಲಿ ಭಿರುದು ಗಳಿಸಿದ ಎಲಿಮಲೆ ಸದರ್ ಮುಅಲ್ಲಿಂ ಫೈಝಲ್ ಸಖಾಫಿ ಕರ್ನೂರು, ಮೆತ್ತಡ್ಕ ಮದ್ರಸ ಅಧ್ಯಾಪಕರಾದ ಹಮೀದ್ ಸಖಾಫಿ ಬೆಟ್ಟಂಪಾಡಿ, ಹಾಗೂ ಸಲ್ಮಾನುಲ್ ಫಾರಿನ್ ಹಿಮಮಿಯವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಮಿತಿ ಉಪಾಧ್ಯಕ್ಷರಾದ ಅಬ್ದುಲ್ಲ ಜಿ ಎಸ್. ಸೂಫಿ ಮುಸ್ಲಿಯಾರ್. ಖಜಾಂಚಿ ಕಾದರ್ ಪಾಣಾಜೆ, ಜಮಾಅತ್ ಜತೆ ಕಾರ್ಯದರ್ಶಿ ಹೈದರ್ ಹಾಜಿ, ಜಮಾಅತ್ ಕೋಶಾಧಿಕಾರಿ ಮಹಮೂದ್ ಮುಸ್ಲಿಯಾರ್, ಜೀರ್ಮುಕ್ಕಿ ಮಸೀದಿ ಕಾರ್ಯದರ್ಶಿ ಹನೀಫ್ ಜೀರ್ಮುಕ್ಕಿ , ಮಹಮ್ಮದ್ ಹಾಜಿ ಕೊಲ್ಲಮೊಗ್ರ, ಅನ್ಸಾರಿಯಾ ಎಜ್ಯುಕೇಶನ್ ಸೆಂಟರ್ ನ ಕಾರ್ಯದರ್ಶಿ ಶರೀಫ್ ಜಟ್ಟಿಪಳ್ಳ ಉಪಸ್ಥಿತರಿದ್ದರು.
ಸಮಿತಿಯ ಜತೆ ಕಾರ್ಯದರ್ಶಿಗಳಾದ ಸಿದ್ದೀಕ್ ಎಲಿಮಲೆ, ಅಶ್ರಫ್ ದಿನಸಿ ಬಜಾರ್, ಹಾರಿಸ್ ಪಳ್ಳಿಕಲ್, ಶಿಹಾಬ್ ಎಲಿಮಲೆ, ಅಬ್ದುಲ್ ಕಾದರ್ ಅತ್ತಿಮಾರಡ್ಕ, ಬಾತಿಷಾ, ಆಸಿಫ್ ಹೊಟ್ಟಚೋಡಿ ಸಹಕರಿಸಿದು. ನಂತರ ನಡೆದ ಬ್ರಹತ್ ಇಫ್ತಾರ್ ಸಂಗಮದಲ್ಲಿ ನೂರಾರು ಉಪವಾಸಿಗರು ಭಾಗವಹಿಸಿದ್ದರು.ನುಸ್ರತ್ ಪ್ರಧಾನ ಕಾರ್ಯದರ್ಶಿ ಸೂಫಿ ಎಲಿಮಲೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.