ಜೆದ್ದಾ(www.vknews.in): ಉಮ್ರಾ ಯಾತ್ರಾರ್ಥಿಗಳ ಬಸ್ ಪಲ್ಟಿಯಾಗಿ ಮೃತಪಟ್ಟವರಲ್ಲಿ ಭಾರತೀಯರೂ ಇದ್ದಾರೆ ಎಂಬುದು ಪ್ರಾಥಮಿಕ ತೀರ್ಮಾನ.
ಬಸ್ಸಿನಲ್ಲಿ ಭಾರತೀಯರಲ್ಲದೆ ಬಾಂಗ್ಲಾದೇಶ ಮತ್ತು ಪಾಕಿಸ್ತಾನದವರೇ ಹೆಚ್ಚಾಗಿದ್ದರು.ಅಸಿರ್ನ ಉತ್ತರದಲ್ಲಿರುವ ಅಕಾಬಾ ಷಾದಲ್ಲಿ ಮಹಿಲ್ ಪಾಸ್ ನಲ್ಲಿ ಬಸ್ ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡು ಈ ಅವಘಡ ಸಂಭವಿಸಿದೆ. ಸಂಜೆ 5.30ರಿಂದ 6ರ ನಡುವೆ ಅಪಘಾತ ಸಂಭವಿಸಿದೆ. ಮೂಲಗಳ ಪ್ರಕಾರ ಬಸ್ನ ಬ್ರೇಕ್ನಲ್ಲಿ ಗಾಳಿ ಇದ್ದದ್ದೇ ಅಪಘಾತಕ್ಕೆ ಕಾರಣ. 20 ಮಂದಿ ಮೃತರಾಗಿರುವ ಬಗ್ಗೆ ವರದಿಯಾಗಿದೆ. ಗಾಯಗೊಂಡ 18 ಜನರನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಇವರಲ್ಲಿ 16 ಮಂದಿ ಸ್ಥಿತಿ ಚಿಂತಾಜನಕವಾಗಿದೆ.
ಸಿವಿಲ್ ಡಿಫೆನ್ಸ್ ತಂಡಗಳು, ರೆಡ್ ಕ್ರೆಸೆಂಟ್ ಮತ್ತು ಸಂಬಂಧಪಟ್ಟ ಭದ್ರತಾ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.