ಪುದುಚೇರಿ (ವಿಶ್ವ ಕನ್ನಡಿಗ ನ್ಯೂಸ್) : ಪುದುಚೇರಿಯಲ್ಲಿ ಬಿ.ಜೆ.ಪಿ. ನಾಯಕನನ್ನು ಬಾಂಬ್ ದಾಳಿ ನಡೆಸಿ ಕೊಲೆ ಮಾಡಲಾಗಿದೆ. ಬಿಜೆಪಿ ಮುಖಂಡರಾದ ಇವರು ಪುದುಚೇರಿ ಗೃಹ ಸಚಿವ ಎ. ನಮಶಿವಾಯಂ ಅವರ ಸೋದರ ಸಂಬಂಧಿ. ಸೆಂಥಿಲಕುಮಾರ (45) ಎಂಬವರನ್ನು ಏಳು ಮಂದಿಯ ತಂಡ ಬಾಂಬ್ ಎಸೆದು ಹತ್ಯೆ ಮಾಡಿದೆ. ಭಾನುವಾರ ರಾತ್ರಿ ಘಟನೆ ನಡೆದಿದೆ.
ರಸ್ತೆ ಬದಿಯ ಬೇಕರಿಯೊಂದರ ಬಳಿ ನಿಂತಿದ್ದ ಸೆಂಥಿಲ್ ಮೇಲೆ ಬೈಕ್ ನಲ್ಲಿ ಬಂದ 7 ಜನರ ತಂಡ ಹಲ್ಲೆ ನಡೆಸಿದೆ. ಗ್ಯಾಂಗ್ ಮೊದಲು ಸೆಂಥಿಲ್ ಮೇಲೆ ಪೆಟ್ರೋಲ್ ಬಾಂಬ್ ಎಸೆದು ನಂತರ ಹತ್ಯೆ ಮಾಡಿದ್ದಾರೆ. ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಸೆಂಥಿಲ್ ಮೇಲೆ ಎರಡು ಬಾರಿ ಬಾಂಬ್ ಸ್ಫೋಟಿಸಿ ಹತ್ಯೆ ಮಾಡಿರುವ ಸಿಸಿಟಿವಿ ದೃಶ್ಯಾವಳಿ ಕೂಡ ಹೊರಬಿದ್ದಿದೆ.
ಕೊಲೆ ವಿಷಯ ತಿಳಿದ ಗೃಹ ಸಚಿವ ನಮಶಿವಾಯಂ ಮತ್ತಿತರರು ಸ್ಥಳಕ್ಕೆ ಆಗಮಿಸಿದರು. ಸಂಬಂಧಿ ಸೆಂಥಿಲ್ನ ಮೃತದೇಹ ನೋಡಿದ ಅವರು ಅಸ್ವಸ್ಥರಾದರು. ಸ್ಥಳದಲ್ಲಿ ನೂರಾರು ಬಿ.ಜೆ.ಪಿ. ಕಾರ್ಯಕರ್ತರೂ ಜಮಾಯಿಸಿದ್ದರು. ಅದೇ ವೇಳೆ ಅಪರಾಧ ಕೃತ್ಯ ನಡೆಸಿ ಪರಾರಿಯಾಗಿದ್ದ ಆರೋಪಿ ಬಳಿಕ ಪೊಲೀಸರಿಗೆ ಶರಣಾಗಿದ್ದಾರೆ ಎಂದು ವರದಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ತನಿಖೆ ಮತ್ತು ವಿಚಾರಣೆ ಮುಂದುವರೆದಿದೆ.
पुदुचेरी में हमलावरों ने की भाजपा नेता की हत्या। हमलावरों ने सेंथिल कुमार पर देशी बम फेंके और बाद में चाकू मारकर मार डाला।#puducherry #BJP pic.twitter.com/kyHBTFJr3p — Pranjal (@Pranjaltweets_) March 27, 2023
पुदुचेरी में हमलावरों ने की भाजपा नेता की हत्या। हमलावरों ने सेंथिल कुमार पर देशी बम फेंके और बाद में चाकू मारकर मार डाला।#puducherry #BJP pic.twitter.com/kyHBTFJr3p
— Pranjal (@Pranjaltweets_) March 27, 2023
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.