ದುಬೈ (ವಿಶ್ವ ಕನ್ನಡಿಗ ನ್ಯೂಸ್) : ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ಣ ಮೂಡಬಿದ್ರಿ ಇದರ ಯು ಎ ಇ ರಾಷ್ಟ್ರೀಯ ಸಮಿತಿಯ 8 ನೇ ವಾರ್ಷಿಕ ಮಹಾ ಸಭೆಯು ದಿನಾಂಕ 12.03.2023 ನೇ ರವಿವಾರದಂದು ರಾತ್ರಿ 8.00 ಗಂಟೆಗೆ ಸರಿಯಾಗಿ ದುಬೈ ಕೆ ಎಂ ಸಿ ಸಿ ಹಾಲ್ ನಲ್ಲಿ ಜನಾಬ್ ಮಹಮ್ಮದ್ ಮಾಡಾವು ರವರ ಅದ್ಯಕ್ಷತೆಯಲ್ಲಿ ನೆರವೇರಿತು.
ವೇದಿಕೆಯಲ್ಲಿ ದಾರುನ್ನೂರ್ ಯು ಎ ಇ ಮುಖ್ಯ ಧಾರ್ಮಿಕ ಸಲಹೆಗಾರ ಉಸ್ತಾದ್ ಅಬ್ದುಲ್ ಸಲಾಂ ಬಾಖವಿ, ದಾರುನ್ನೂರ್ ಮಜ್ಲಿಸುನ್ನೂರ್ ಅಮೀರ್ ಸಯ್ಯದ್ ಆಸ್ಕರ್ ಅಲಿ ತಂಗಳ್ ಕೊಲ್ಪೆ, ದಾರುನ್ನೂರ್ ಯು ಎ ಇ ಮುಖ್ಯ ಉಪದೇಶಕ ಜನಾಬ್ ಶಂಸುದ್ದೀನ್ ಸೂರಲ್ಪಾಡಿ, ಧಾರ್ಮಿಕ ಉಪದೇಶಕ ಉಸ್ತಾದ್ ಸಿರಾಜುದ್ದೀನ್ ಫ಼ೈಝಿ, ಉಪದೇಶಕ ಜನಾಬ್ ಹಾಜಿ ಮುಹಿದ್ದೀನ್ ಕುಟ್ಟಿ ಕಕ್ಕಿಂಜೆ, ಉಪದೇಶಕ ಜನಾಬ್ ಅಬ್ದುಲ್ ಲತೀಫ್ ಹಾಜಿ ಮದರ್ ಇಂಡಿಯಾ , ಉಪದೇಶ ಜನಾಬ್ ಮಹಮ್ಮದ್ ಕಲ್ಲಾಪು, ದಾರುನ್ನೂರ್ ದುಬೈ ಸ್ಟೇಟ್ ಅದ್ಯಕ್ಷ ಜನಾಬ್ ಅಬ್ದುಲ್ ಸಲಾಂ ಬಪ್ಪಳಿಗೆ, ದಾರುನ್ನೂರ್ ಅಬುಧಾಬಿ ಸ್ಟೇಟ್ ಸಮಿತಿ ಅದ್ಯಕ್ಷ ಜನಾಬ್ ರವೂಫ್ ಹಾಜಿ ಕೈಕಂಬ, ದಾರುನ್ನೂರ್ ಶಾರ್ಜಾ ಸ್ಟೇಟ್ ಸಮಿತಿ ಅದ್ಯಕ್ಷ ಜನಾಬ್ ಮಹಮ್ಮದ್ ಅಶ್ರಫ್ ಬಾಳೆಹೊನ್ನೂರ್ ಮೊದಲಾದವರು ಉಪಸ್ಥಿತರಿದ್ದರು.
ದಾರುನ್ನೂರ್ ಯು ಎ ಇ ಉಪದೇಶಕ ಸಯ್ಯದ್ ಆಸ್ಕರ್ ಅಲಿ ತಂಗಳ್ ರವರ ದುಆದ ಬಳಿಕ ಪ್ರಧಾನ ಕಾರ್ಯದರ್ಶಿ ಜನಾಬ್ ಬದ್ರುದ್ದೀನ್ ಹೆಂತಾರ್ ರವರು ವೇದಿಕೆಯಲ್ಲಿರುವ ಪ್ರಮುಖರನ್ನು ಮತ್ತು ಆಗಮಿಸಿದ ಕಾರ್ಯಕರ್ತರನ್ನು ಸ್ವಾಗತಿಸಿದರು. ಈ ಸಂದರ್ಭ ದಾರುನ್ನೂರಿನ ಪ್ರಸಕ್ತ ಸನ್ನಿವೇಶವನ್ನು ವಿವರಿಸಿದರು. ಬಳಿಕ ಉಸ್ತಾದ್ ಸಿರಾಜುದ್ದೀನ್ ಫೈಝಿ ಯವರು ಕಾರ್ಯಕ್ರಮವನ್ನು ಅಲ್ಲಾಹನ ನಾಮದಿಂದ ಉದ್ಘಾಟಿಸಿದರು. ಈ ಸಂದರ್ಭ ದಾರುನ್ನೂರ್ ವಿದ್ಯಾ ಕೇಂದ್ರದ ನೇತೃತ್ವ ಮತ್ತು ಅಲ್ಲಿಯ ವಿದ್ಯಾಭ್ಯಾಸ ರೀತಿಯನ್ನು ಹೊಗಳಿ ಮಾತನಾಡಿದರು. ಅದೇ ರೀತಿ ವಿದ್ಯಾ ಕೇಂದ್ರಗಳಿಗೆ ಮಾಡುವ ಸಹಾಯ ಸಹಕಾರ ಎಂದೂ ಪೋಲಾಗಲಾರದು. ಇಹ ಪರ ವಿಜಯಕ್ಕೆ ಇದುವೇ ಮೂಲ ಕಾರಣವಾಗುವುದರಲ್ಲಿ ಸಂಶಯವಿಲ್ಲ ಎಂದು ವಿವರಿಸಿದರು.
ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಜನಾಬ್ ಮಹಮ್ಮದ್ ಶಬೀರ್ ಫರಂಗಿಪೇಟೆ ಯವರು ವಾಚಿಸಿದರು. ವಾರ್ಷಿಕ ಲೆಕ್ಕ ಪತ್ರವನ್ನು ಲೆಕ್ಕ ಪರಿಶೋಧಕ ಜನಾಬ್ ಆನ್ಸಾಫ್ ಪಾತೂರ್ ರವರು ಮಂಡಿಸಿದರು. ವರದಿ ವಾಚನ ಮತ್ತು ಲೆಕ್ಕ ಪತ್ರವನ್ನು ಅನುಮೋದಿಸಲಾಯಿತು. ಬಳಿಕ 2022 ರ ಸಾಲಿನಲ್ಲಿ ಉತ್ತಮ ನಿರ್ವಹಣೆ ಮಾಡಿದ ಸ್ಟೇಟ್ ಸಮಿತಿಗಳನ್ನು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಪ್ರಥಮ ಸ್ಥಾನವನ್ನು ಶಾರ್ಜಾ ಸ್ಟೇಟ್ , ದ್ವಿತೀಯ ಸ್ಥಾನವನ್ನು ಶಾರ್ಜಾ ಸ್ಟೇಟ್ ಮತ್ತು ತೃತೀಯ ಸ್ಥಾನವನ್ನು ಅಬುಧಾಬಿ ಸ್ಟೇಟ್ ಕ್ರಮವಾಗಿ ಪಡಕೊಂಡಿತು. ಈ ವರ್ಷದ ವಿಶಿಷ್ಟ ವ್ಯಕ್ತಿತ್ವದ ಅವಾರ್ಡಗೆ ಜನಾಬ್ ನವಾಝ್ ಬಿ ಸಿ ರೋಡ್ ಭಾಜನರಾದರು. ಈ ಸಂದರ್ಭ 2014 ರಿಂದ ದಾರುನ್ನೂರಿಗೆ ಅವರು ನೀಡಿದ ಉದಾತ್ತ ಕೊಡುಗೆಯನ್ನು ಸೇವೆಯನ್ನು ಸ್ಮರಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು ಸನ್ಮಾನವನ್ನು ಶೈಖುನ ಅಬ್ದುಲ್ ಸಲಾಂ ಬಾಖವಿ ಉಸ್ತಾದ್ ಮತ್ತು ಕೇಂದ್ರ ಸಮಿತಿ ಪ್ರಮುಖರ ಮುಖಾಂತರ ಹಸ್ತಾಂತರಿಸಲಾಯಿತು.
ಬಳಿಕ ಹಾಲಿ ಸಮಿತಿ ವಿಸರ್ಜನೆ ಮತ್ತು ಲೆಕ್ಕ ಪತ್ರದ ಅವಲೋಕನ ಮಾಡಲು ಅದ್ಯಕ್ಷ ರಾದ ಜನಾಬ್ ಮಹಮ್ಮದ್ ಮಾಡಾವು ರವರನ್ನು ಆಹ್ವಾನಿಸಲಾಯಿತು. ಈ ಸಂದರ್ಭ ಅದ್ಯಕ್ಷರು ದಾರುನ್ನೂರಿನ ಪ್ರಸಕ್ತ ಸನ್ನಿವೇಶವನ್ನು ವಿವರಿಸಿದರು. ದಾರುನ್ನೂರನ್ನು ಕಟ್ಟಿ ಬೆಳೆಸುವಲ್ಲಿ ಕೇಂದ್ರ ಸಮಿತಿ ಅದ್ಯಕ್ಷ ಶೈಖುನ ತ್ವಾಕ ಉಸ್ತಾದರ ಮತ್ತು ಕೇಂದ್ರ ಸಮಿತಿ ಪ್ರಮುಖರ ತ್ಯಾಗವನ್ನು ಹೊಗಳಿ ಕಳೆದ ಅವಧಿಯಲ್ಲಿ ಸಹಕರಿಸಿದ ಸ್ಟೇಟ್ ಸಮಿತಿ ಪ್ರಮುಖರಿಗೆ ಅದೇ ರೀತಿ ರಾಷ್ಟ್ರೀಯ ಸಮಿತಿ ಪ್ರಮುಖರಿಗೆ ಅಂತರಾಳದ ಕೃತಜ್ಞತೆಯನ್ನು ಅರ್ಪಿಸಿ 2022 ರ ಸಾಲಿನ ಸಮಿತಿಯನ್ನು ಬರ್ಖಾಸ್ತು ಗೊಳಿಸುವುದಾಗಿ ಘೋಷಿಸಿ ನೂತನ ಸಮಿತಿ ರಚನೆಗೆ ಅನುವು ಮಾಡಿ ಕೊಟ್ಟರು.
ಚುನಾವನಾಧಿಕಾರಿಯಾಗಿ ದಾರುನ್ನೂರ್ ಅಬುಧಾಬಿ ಶಾಖೆಯ ಪ್ರಧಾನ ಕಾರ್ಯದರ್ಶಿ ಜನಾಬ್ ಜಲೀಲ್ ಗುರುಪುರರವರನ್ನು ನೇಮಿಸಲಾಯಿತು. 2023 ರ ಸಾಲಿಗೆ ಇ ಕೆಳಗಿನ ಪ್ರಮುಖರನ್ನು ಸಾರಥಿಗಳನ್ನಾಗಿ ಮಾಡಲಾಯಿತು.
ಮುಖ್ಯ ಪೋಷಕರು – ಜನಾಬ್ ನಿಸಾರ್ ಅಹ್ಮದ್ ಕಾರ್ಕಳ ಪೋಷಕರು – ಜನಾಬ್ ಅಬ್ದುಲ್ಲಾ ಹಾಜೀ ಮದುಮೂಲೆ, ಜನಾಬ್ ಅಹ್ಮದ್ ಮತೀನ್ ಚಿಲ್ಮಿ ಮಂಗಳೂರು ಮುಖ್ಯ ಧಾರ್ಮಿಕ ಉಪದೇಶಕರು – ಉಸ್ತಾದ್ ಅಬ್ದುಲ್ ಸಲಾಂ ಬಾಖವಿ ಮುಖ್ಯ ಸಲಹೆಗಾರರು – ಜನಾಬ್ ಶಂಸುದ್ದೀನ್ ಸೂರಲ್ಪಾಡಿ
ಉಪದೇಶಕರು – ಸಯ್ಯದ್ ಆಸ್ಕರ್ ಅಲಿ ತಂಗಳ್ ಕೋಲ್ಪೆ, ಹಾಜಿ ಮೊಹಿದ್ದೀನ್ ಕುಟ್ಟಿ ಕಕ್ಕಿಂಜೆ, ಜನಾಬ್ ಶಂಸುದ್ದೀನ್ ಕಲ್ಕಾರ್, ಜನಾಬ್ ಇಕ್ಬಾಲ್ ಬಂಟ್ವಾಳ್, ಜನಾಬ್ ಅಶ್ರಫ್ ಖಾನ್ ಮಾಂತೂರ್, ಜನಾಬ್ ಯೂಸುಫ್ ಈಶ್ವರಮಂಗಲ, ಜನಾಬ್ ಬಶೀರ್ ಬಂಟ್ವಾಳ್, ಎಡ್ವೋಕೇಟ್ ಇಬ್ರಾಹಿಂ ಖಲೀಲ್, ಜನಾಬ್ ಲತೀಫ್ ಹಾಜಿ ಮದರ್ ಇಂಡಿಯಾ, ಜನಾಬ್ ಮಹಮ್ಮದ್ ಕಲ್ಲಾಪು, ಜನಾಬ್ ಆನ್ವರ್ ಹುಸೈನ್ ಅಡ್ಡೂರ್, ಜನಾಬ್ ನಾಸಿರ್ ಸುರತ್ಕಲ್
ಗೌರವಾದ್ಯಕ್ಷರು – ಜನಾಬ್ ಮಹಮ್ಮದ್ ಮುಸ್ತಾಕ್ ಕದ್ರಿ ಅದ್ಯಕ್ಷರು – ಜನಾಬ್ ಮಹಮ್ಮದ್ ಮಾಡಾವು ಉಪಾದ್ಯಕ್ಷರುಗಳು – ಜನಾಬ್ ಮಹಮ್ಮದ್ ರಫೀಕ್ ಸುರತ್ಕಲ್, ಜನಾಬ್ ರವೂಫ್ ಹಾಜಿ ಕೈಕಂಬ, ಜನಾಬ್ ಅಬ್ದುಲ್ ಸಲಾಂ ಬಪ್ಪಳಿಗೆ, ಜನಾಬ್ ಅಶ್ರಫ್ ಬಾಳೆಹೊನ್ನೂರ್, ಜನಾಬ್ ಅಶ್ರಫ್ ನಾಟೆಕಲ್ ಪ್ರಧಾನ ಕಾರ್ಯದರ್ಶಿ – ಜನಾಬ್ ಬದ್ರುದ್ದೀನ್ ಹೆಂತಾರ್ ಕಾರ್ಯದರ್ಶಿಗಳು – ಜನಾಬ್ ಮಹಮ್ಮದ್ ಸಾಜಿದ್ ಬಜ್ಪೆ, ಜನಾಬ್ ಮಹಮ್ಮದ್ ಶಬೀರ್ ಫರಂಗಿಪೇಟೆ, ಜನಾಬ್ ಸುಹೈಲ್ ಚೊಕ್ಕಬೆಟ್ಟು ಕೋಶಾಧಿಕಾರಿ – ಜನಾಬ್ ಮಹಮ್ಮದ್ ಸಿರಾಜ್ ಬಿ ಸಿ ರೋಡ್
ಲೆಕ್ಕ ಪರಿಶೋಧಕ – ಜನಾಬ್ ಆನ್ಸಾಫ್ ಪಾತೂರು ಸಹ ಲೆಕ್ಕ ಪರಿಶೋಧಕ – ಜನಾಬ್ ನಾಸಿರ್ ಬಪ್ಪಳಿಗೆ ಸಂಘಟನೆ ಕಾರ್ಯದರ್ಶಿ – ಜನಾಬ್ ನವಾಜ್ ಬಿ ಸಿ ರೋಡ್ ಸಹ ಸಂಘಟನೆ ಕಾರ್ಯದರ್ಶಿಗಳು – ಜನಾಬ್ ಜಾಬಿರ್ ಬಪ್ಪಳಿಗೆ, ಜನಾಬ್ ಇಸ್ಮಾಯಿಲ್ ಮುಂಧೀರ್ ತೋಡಾರ್ ಮೀಡಿಯಾ ಕೋಆರ್ಡಿನೇಟರ್ – ಜನಾಬ್ ಅಶ್ರಫ್ ಬಾಂಬಿಲ
ಧಾರ್ಮಿಕ ಸಲಹೆಗಾರರು – ಉಸ್ತಾದ್ ಸುಲೈಮಾನ್ ಮೌಲವಿ ಕಲ್ಲೆಗ, ಉಸ್ತಾದ್ ಸಿರಾಜುದ್ದೀನ್ ಫೈಝಿ ಬಂಟ್ವಾಳ, ಉಸ್ತಾದ್ ಅಬ್ದುಲ್ ರಜಾಕ್ ಪಾತೂರ್, ಉಸ್ತಾದ್ ಅಲಿ ಹಸನ್ ಫೈಝಿ ಕುಕ್ಕಾಜೆ, ಉಸ್ತಾದ್ ಬದ್ರುಲ್ ಮುನೀರ್ ಫೈಝಿ ಸುರಿಬೈಲ್
ಕನ್ವೀನರ್ ಗಳು – ಜನಾಬ್ ಜಲೀಲ್ ಗುರುಪುರ, ಜನಾಬ್ ಸಾಹುಲ್ ಬಿ ಸಿ ರೋಡ್, ಜನಾಬ್ ಶರೀಫ್ ಕೊಡ್ನೀರ್, ಜನಾಬ್ ಕೆ ಪಿ ಹನೀಫ್ ಮೂಡಬಿದ್ರಿ, ಜನಾಬ್ ಅಬ್ದುಲ್ ರಝಾಕ್ ಸೊಂಪಾಡಿ, ಜನಾಬ್ ಉಸ್ಮಾನ್ ಮರೀಲ್ , ಜನಾಬ್ ಇಫ್ತಿಕಾರ್ ಅಡ್ಯಾರ್ ಕಣ್ಣೂರ್, ಜನಾಬ್ ನೂರ್ ಮಹಮ್ಮದ್ ನೀರ್ಕಜೆ, ಜನಾಬ್ ಅಬ್ದುಲ್ ಖಾದರ್ ಬೈತಡ್ಕ, ಜನಾಬ್ ಮಹಮ್ಮದ್ ಶರೀಫ್ ಕಾವು, ಜನಾಬ್ ಅಶ್ರಫ್ ಅರ್ತಿಕೆರೆ, ಜನಾಬ್ ಅಬುಬಕ್ಕರ್ ಸಿದ್ದೀಕ್ ಮೂಡಬಿದ್ರಿ, ಜನಾಬ್ ನವಾಝ್ ಮನಲ್, ಜನಾಬ್ ಬಶೀರ್ ಕೆಮ್ಮಿಂಜೆ, ಜನಾಬ್ ಅಶ್ರಫ್ ಪಾವೂರ್, ಜನಾಬ್ ಶಂಸುದ್ದೀನ್ ಹಮೀದ್ ಮೂಡಬಿದ್ರಿ, ಜನಾಬ್ ಅಬ್ಬಾಸ್ ಕೇಕುಡೆ.
ಕಾರ್ಯಕಾರಿ ಸಮಿತಿ ಸದಸ್ಯರು – ಜನಾಬ್ ತಾಹಿರ್ ಹೆಂತಾರ್ , ಜನಾಬ್ ಅಶ್ರಫ್ ಕೆಮ್ಮಿಂಜೆ , ಜನಾಬ್ ಅಬ್ದುಲ್ ರಹ್ಮಾನ್ ಸಜೀಪ , ಜನಾಬ್ ಮುನೀರ್ ಕಾಂಞಂಗಾಡ್ , ಜನಾಬ್ ಜುಬೈರ್ ತೋಡಾರ್ , ಜನಾಬ್ ಯೂನು ಸ್ ತಲಪಾಡಿ, ಜನಾಬ್ ಜಬ್ಬಾರ್ ಕಲ್ಲಡ್ಕ, ಜನಾಬ್ ಇಬ್ರಾಹಿಂ ಕುಂಡಾಜೆ ಆತೂರು, ಜನಾಬ್ ಸಮೀರ್ ಇಬ್ರಾಹಿಂ ಕಲ್ಲರೆ, ಜನಾಬ್ ಅಬ್ದುಲ್ ಅಝೀಝ್ ಸೊಂಪಾಡಿ, ಜನಾಬ್ ಆಝರುದ್ದೀನ್ ಹಂಡೆಲ್, ಜನಾಬ್ ನಿಝಾ೦ ತೋಡಾರ್ , ಜನಾಬ್ ಆನ್ವರ್ ಮಾನಿಲ, ಜನಾಬ್ ಹನೀಫ್ ಹರಿಯಮೂಲೆ, ಜನಾಬ್ ಫೈಸಲ್ ಶೀತಾಂಗೋಳಿ, ಜನಾಬ್ ಯಹ್ಯಾ ಕೊಡ್ಲಿಪೇಟೆ, ಜನಾಬ್ ಶಾಫಿ ಪೆರುವಾಯಿ, ಜನಾಬ್ ಅಲಿ ಈಶ್ವರಮಂಗಲ, ಜನಾಬ್ ಜಾಬೀರ್ ಬೆಟ್ಟಂಪಾಡಿ , ಜನಾಬ್ ಇಸ್ಹಾಕ್ ಕುಡ್ತ ಮುಗೇರ್, ಜನಾಬ್ ಮೊಹಮ್ಮದ್ ರೆಡ್ ಟ್ಯಾಗ್, ಜನಾಬ್ ಇಮ್ತಿಯಾಜ್ ಕಡಬ, ಜನಾಬ್ ಮುಶ್ರಿಫ್ ತೋಡಾರ್, ಜನಾಬ್ ಅಬ್ದುಲ್ ರಝಾಕ್ ಮನಿಲ, ಜನಾಬ್ ರಿಯಾಝ್ ಕುಲಾಯಿ. ಮೊದಲಾದವರನ್ನು ಆರಿಸಲಾಯಿತು.
ಬಳಿಕ ಉಸ್ತಾದ್ ಶೈಖುನ ಅಬ್ದುಲ್ ಸಲಾಂ ಬಾಖವಿ ಯವರು ಉತ್ತಮವಾದ ಸದುಪದೇಶವನ್ನು ನೀಡಿದರು. ನೂತನ ಅದ್ಯಕ್ಷರ ಭಾಷಣದಲ್ಲಿ ಜನಾಬ್ ಮಹಮ್ಮದ್ ಮಾಡಾವುರವರು ಶೈಖುನ ತ್ವಾಕಾ ಉಸ್ತಾದರ ನೇತೃತ್ವದಲ್ಲಿ ಕಾಶಿಪಟ್ಣದಲ್ಲಿ ದಾರುನ್ನೂರ್ ವಿದ್ಯಾ ಸಂಸ್ಥೆ ಅತ್ಯಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು ಉತ್ತಮ ಗುಣಮಟ್ಟದ, ಉತ್ತಮ ಮೂಲಭೂತ ಸೌಲಭ್ಯಗಳೊಂದಿಗೆ, ಉತ್ತಮ ವಾತಾವರಣದಲ್ಲಿ ನೀಡುತ್ತಿದ್ದು, ವನಿತಾ ವಿದ್ಯಾಲಯದ ಕಾಮಗಾರಿ ಮುಂದುವರಿಯುತ್ತಿದ್ದು ನಮ್ಮೆಲ್ಲರ ಆತ್ಮ ವಿಶ್ವಾಸವನ್ನು ಹೆಚ್ಚಿಸಿರುತ್ತದೆ , ಯು ಎ ಇ ಯ ವಿವಿಧ ಭಾಗಗಳಲ್ಲಿ ದಾರುನ್ನೂರ್ ಕಾರ್ಯಕರ್ತರು ಇದರ ಅಭ್ಯುದಯದಲ್ಲಿ ಸಕ್ರಿಯರಾಗಿ ಸಹಕರಿಸುತ್ತಿದ್ದು, ತಮ್ಮೆಲ್ಲರ ಸಹಕಾರ ಇದೇ ರೀತಿ ಮುಂದುವರಿಸಿ ದಾರುನ್ನೂರ್ ವಿದ್ಯಾ ಸಂಸ್ಥೆಯನ್ನು ಇನ್ನಷ್ಟು ಉನ್ನತಿಯತ್ತ ಕೊಂಡೊಯ್ಯಲು ಸಹಕರಿಸಬೇಕೆಂದು ವಿನಂತಿಸಿದರು.
ಈ ಸಂದರ್ಭ ದಾರುಸ್ಸಲಾಂ ಎಜುಕೇಷನ್ ಸೆಂಟರ್ ಬೆಳ್ತಂಗಡಿ ಇದರ ವತಿಯಿಂದ ದಿನಾಂಕ 18/03/2023 ರಂದು ಸಯ್ಯದ್ ಆಸ್ಕರ್ ಅಲಿ ತಂಗಳ್ ರವರ ಅದ್ಯಕ್ಷ ತೆಯಲ್ಲಿ ನಡೆಯುವ ಆಹ್ಲನ್ ರಮಳಾನ್ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆಗೊಳಿಸಲಾಯಿತು. ಕೊನೆಯಲ್ಲಿ ಕಾರ್ಯದರ್ಶಿ ಜನಾಬ್ ಸುಹೈಲ್ ಚೊಕ್ಕಬೆಟ್ಟು ರವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.