ಉಳ್ಳಾಲ (www.vknews.in) ; ಮುಂಬರುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ತಲಪಾಡಿ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರ ಪೂರ್ವಭಾವಿ ತುರ್ತು ಸಭೆ ಇಂದು ಇಲ್ಲಿನ ಗೆಸ್ಟ್ ಹೌಸ್ ನಲ್ಲಿ ಮಾನ್ಯ ಶಾಸಕರಾದ ಯು ಟಿ ಖಾದರ್ ರವರ ಉಪಸ್ಥಿತಿಯಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ವಲಯ ಸಮಿತಿ ಅಧ್ಯಕ್ಷರಾದ ಟಿ. ಎ. ಟಿ ಅಬ್ದುಲ್ ಖಾದರ್ ವಹಿಸಿದ್ದರು. ತಲಪಾಡಿ ವಲಯ ಸಮಿತಿ ಕಾರ್ಯದರ್ಶಿ ಶಬೀರ್ ಅಲಿ ಸ್ವಾಗತಿಸಿದರು.
ಸಭೆಯಲ್ಲಿ ಮಾಜಿ ತಾಪಂ ಅಧ್ಯಕ್ಷ ಮೊಹಮ್ಮದ್ ಮೋನು ಮಲಾರ್, ಕಾಂಗ್ರೆಸ್ ಮುಖಂಡರಾದ ಮುಸ್ತಫಾ ಮಲಾರ್,ರವಿ ರಾಜ್ ಶೆಟ್ಟಿ, ವಲಯ ಸಮಿತಿಯ ಮುಖಂಡರಾದ. ವೈಭಬ್ ಶೆಟ್ಟಿ, ಇಸ್ಮಾಯಿಲ್ ಬಿ. ಎಸ್, ಅಶ್ರಫ್ ಕೆಸಿ ರೋಡ್, ವಿನು ಶೆಟ್ಟಿ. ಅಬ್ದುಲ್ ಸತ್ತಾರ್ ಸದ್ದಾಂ, ಸಲಾಂ ಕೆ ಸಿ ರೋಡ್, ಹಸೈನಾರ್, ಸಲಾಂ ಪಿಲಿಕೂರ್, ಯಾಕೂಬ್ ಪಿಲಿಕೂರ್, ಸುರೇಖಾ ಚಂದ್ರಹಾಸ್. ಅಬ್ಬಾಸ್ ಪಂಜಳ, ನವಾಜ್ ಮಾಧವಪುರ, ಜಯಂತಿ ಪಕ್ಕಳ, ರಾಮಯ್ಯ ಕಿಲ್ಲೆ, ಬಾವಾ ಮೊಯಿದಿನ್, ಇಬ್ರಾಹಿಂ ಕೆ ಸಿ ರೋಡ್ ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
ಇದೇ ವೇಳೆ ಕಾಂಗ್ರೆಸ್ ಪಕ್ಷದ ಸಿದ್ದಾಂತವನ್ನು ಮನಗೊಂಡು ತಲಪಾಡಿ ಗ್ರಾಮ ಪಂಚಾಯತ್ ಎಸ್ಡಿಪಿಐ ಸದಸ್ಯೆ ಹಬೀಬಾ ಅವರ ಪತಿ, ಉದ್ಯಮಿ ಎಸ್ಡಿಪಿಐ ಪಕ್ಷದ ಕಾರ್ಯಕರ್ತ ಸಿದ್ದೀಕ್ ಕೆ ಸಿ ನಗರ, ಸಾಮಾಜಿಕ ಕಾರ್ಯಕರ್ತ ನೌಷದ್ ಪಿಲಿಕೂರು ಯು. ಟಿ ಖಾದರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.