ಕಣ್ಣೂರು (ವಿಶ್ವ ಕನ್ನಡಿಗ ನ್ಯೂಸ್) : ಕರಿಪುರ ವಿಮಾನ ನಿಲ್ದಾಣದಿಂದ ಹಿಂತಿರುಗುತ್ತಿದ್ದ ಕಾರು ನಿಯಂತ್ರಣ ತಪ್ಪಿ ಮೋರಿಗೆ ಡಿಕ್ಕಿ ಹೊಡೆದ ಪರಿಣಾಮ 10 ವರ್ಷದ ಬಾಲಕ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ. ಮಟ್ಟನೂರು ಉರುವಾಚಲದ ಮಂಚೇರಿ ಪೋಯಿಲ್ನ ಅರವಿಂದಾಕ್ಷನ್ (65) ಮತ್ತು ಮೊಮ್ಮಗ ಶರೋನ್ (10) ಮೃತರು.
ಎಂಟು ಮಂದಿ ಗಾಯಗೊಂಡಿದ್ದಾರೆ. ಅವರು ಕಣ್ಣೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೂತುಪರಂಪ್-ಮಟ್ಟನ್ನೂರು ರಸ್ತೆಯ ಮೇರುವಂಬೈ ಎಂಬಲ್ಲಿ ಶುಕ್ರವಾರ ಬೆಳಗ್ಗೆ ಅಪಘಾತ ಸಂಭವಿಸಿದೆ. ಮೂವರ ಸ್ಥಿತಿ ಚಿಂತಾಜನಕವಾಗಿದೆ
ಚಾಲಕ ಅಭಿಷೇಕ್ (25), ಶಿಲ್ಪಾ (30), ಆರಾಧ್ಯ (11), ಸ್ವಯಂಪ್ರಭ (55), ಶಿನು (36), ಧನುಷಾ (28), ಸಿದ್ಧಾರ್ಥ್ (8) ಮತ್ತು ಸಾರಂಗ್ (8) ಗಾಯಗೊಂಡಿದ್ದಾರೆ. ವಿದೇಶದಿಂದ ಬಂದಿದ್ದ ಶಿಲ್ಪಾ ಜೊತೆ ಕುಟುಂಬ ವಾಪಸಾಗುತ್ತಿದ್ದಾಗ ದುರಂತ ಸಂಭವಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.