ಮೀರತ್ (www.vknews.in) : ರಾಮಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣದಲ್ಲಿ ತೀರ್ಪು ನೀಡದೇ ಇರಲು ತಮಗೆ ಒತ್ತಡವಿತ್ತು ಎಂದು ಅಲಹಾಬಾದ್ ಹೈಕೋರ್ಟ್ ಮಾಜಿ ನ್ಯಾಯಾಧೀಶ ಸುಧೀರ್ ಅಗರ್ವಾಲ್ ಹೇಳಿದ್ದಾರೆ. ಅಂದು ತೀರ್ಪು ನೀಡದೇ ಇದ್ದಿದ್ದರೆ ಮುಂದಿನ 200 ವರ್ಷಗಳ ಕಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಬರುತ್ತಿರಲಿಲ್ಲ ಎಂದರು.
2010 ರ ರಾಮಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣದ ತೀರ್ಪು ನೀಡಿದ ಪೀಠದ ಭಾಗವಾಗಿದ್ದ ಸುಧೀರ್ ಏಪ್ರಿಲ್ 23, 2020 ರಂದು ನಿವೃತ್ತರಾದರು. ತೀರ್ಪಿನ ನಂತರ ನಾನು ತುಂಬಾ ಶಾಂತವಾಗಿದ್ದೇನೆ. ಪ್ರಕರಣದ ತೀರ್ಪನ್ನು ಮುಂದೂಡುವಂತೆ ಒತ್ತಡ ಇತ್ತು. ಒಳಗೆ ಮತ್ತು ಹೊರಗೆ ಒತ್ತಡವಿತ್ತು. ಮೀರತ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತೀರ್ಪನ್ನು ಹೇಗಾದರೂ ವಿಳಂಬ ಮಾಡುವಂತೆ ಕುಟುಂಬ ಸದಸ್ಯರು ಮತ್ತು ಸಂಬಂಧಿಕರು ಸೂಚಿಸುತ್ತಿದ್ದರು.
ಸೆಪ್ಟೆಂಬರ್ 2010 ರಲ್ಲಿ, ಅಲಹಾಬಾದ್ ನ್ಯಾಯಾಲಯವು ರಾಮಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣದ ತೀರ್ಪನ್ನು ಪ್ರಕಟಿಸಿತು. ತ್ರಿಸದಸ್ಯ ಪೀಠದ ಬಹುಮತದ ತೀರ್ಪು 2:1 ಆಗಿತ್ತು. ಅಯೋಧ್ಯೆಯಲ್ಲಿರುವ 2.77 ಎಕರೆ ಭೂಮಿಯನ್ನು ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾಡ ಮತ್ತು ರಾಮಲಲ್ಲಾ ಎಂಬ ಮೂರು ವಿಭಾಗಗಳಿಗೆ ಹಂಚುವ ತೀರ್ಪು ನೀಡಲಾಗಿತ್ತು. ನ್ಯಾಯಮೂರ್ತಿ ಎಸ್.ಯು. ಖಾನ್, ಸುಧೀರ್ ಅಗರ್ವಾಲ್ ಮತ್ತು ಡಿವಿ ಶರ್ಮಾ ಅವರನ್ನೊಳಗೊಂಡ ಪೀಠವು ತೀರ್ಪು ನೀಡಿತ್ತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.