ಕುವೈತ್ ನಗರ (www.vknews.in) | ಕೇರಳದ ಯುವಕನೊಬ್ಬ ತನ್ನ ಕೆಲಸದ ಸ್ಥಳದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಮೃತನನ್ನು ಕೊಲ್ಲಂ ಮೂಲದ ಅನುಷಾದ್ ಅಬ್ದುಲ್ ವಹಾಬ್ (36) ಎಂದು ಗುರುತಿಸಲಾಗಿದೆ. ಅವರು ಕುವೈತ್ನ ಫೈಹಾ ಪ್ರದೇಶದ ನಿವಾಸಿಯೊಬ್ಬರ ಮನೆಯಲ್ಲಿ ಹೌಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು.
ಐಸಿಎಫ್ ಕುವೈತ್ ರಾಷ್ಟ್ರೀಯ ಸೇವಾ ವ್ಯವಹಾರಗಳ ಕಾರ್ಯದರ್ಶಿ ಶಮೀರ್ ಮುಸ್ಲಿಯಾರ್ ಅವರು ಮೃತದೇಹವನ್ನು ತಾಯ್ನಾಡಿಗೆ ಕೊಂಡೊಯ್ಯಲು ಕಾನೂನು ಕ್ರಮಗಳ ನೇತೃತ್ವ ವಹಿಸಿದ್ದಾರೆ. ಮೃತರು ಪತ್ನಿ ಶೆಮಿನಾ, ತಂದೆ ಅಬ್ದುಲ್ ವಹಾಬ್, ತಾಯಿ ಅಸ್ಮಾಬಿ ಹಾಗು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.