ಸುಳ್ಯ (www.vknews.in) : ಯುವ ವೈದ್ಯೆಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ನೀರ್ಚಾಲು ಕನ್ನೆಪ್ಪಾಡಿ ನಿವಾಸಿ, ಕ್ಯಾಂಪೋ ನಿವೃತ್ತ ಉದ್ಯೋಗಿ ಗೋಪಾಲಕೃಷ್ಣ ಭಟ್ ರ ಪುತ್ರಿ ಡಾ. ಪಲ್ಲವಿ ಜಿ.ಕೆ. (25) ಎಂದು ತಿಳಿದು ಬಂದಿದೆ. ಇವರು ಸರಕಾರಿ ಆಸ್ಪತ್ರೆಯಲ್ಲಿ ಇಂಟನ್ ಶಿಪ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ಇವರು ಸೋಮವಾರ ರಾತ್ರಿ ಊಟ ಮಾಡಿ ತಂದೆ ತಾಯಿ ಜತೆ ಮಾತನಾಡಿ 11 ಗಂಟೆಗೆ ತನ್ನ ಕೊಠಡಿಗೆ ತೆರಳಿದ್ದರು. ಬೆಳಗ್ಗೆ 6 ಗಂಟೆ ವೇಳೆಗೆ ತಂದೆ ಎದ್ದು ಕೊಠಡಿಯತ್ತ ತೆರಳಿದಾಗ ಪುತ್ರಿ ನೇಣು ಬಿಗಿದುಕೊಂಡು ಮೃತಪಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದಾಳೆ. ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.