ಉಡುಪಿ (www.vknews.in) : ಗಾಂಜಾ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಇಬ್ಬರನ್ನು ಉಡುಪಿ ಜಿಲ್ಲೆಯ ಕೋಟ ಮಣೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಅಸ್ಸಾಂ ರಾಜ್ಯದ ಸದಾಂ ಹುಸೇನ್ ಮತ್ತು ಅಫ್ರಾಬ್ ಹುಸೇನ್ ಬಂಧಿತರು.
ಮಣೂರು ಬಾಳೆಬೆಟ್ಟು ಬಸ್ಸು ನಿಲ್ದಾಣದ ಬಳಿ ಇಬ್ಬರು ಪ್ಲಾಸ್ಟಿಕ್ ಚೀಲವನ್ನು ಹಿಡಿದುಕೊಂಡಿದ್ದು, ಪೊಲೀಸರನ್ನು ನೋಡಿ ಓಡಲು ಯತ್ನಿಸಿದ್ದರು. ಸಿಬ್ಬಂದಿ ಸಹಾಯದಿಂದ ಈರ್ವರನ್ನು ವಿಚಾರಿಸಿದಾಗ ಪ್ಲಾಸ್ಟಿಕ್ ಕವರ್ ನಲ್ಲಿ ಮಾದಕ ವಸ್ತು ಗಾಂಜಾ ಇರುವ ಬಗ್ಗೆ ಒಪ್ಪಿಕೊಂಡಿದ್ದರು. ಬಂಧಿತರಿಂದ ರೂ.28ಸಾವಿರ ಮೌಲ್ಯದ 920 ಗ್ರಾಂ ಮಾದಕ ವಸ್ತುವನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.