ಮಂಗಳೂರು (www.vknews.in) : ಪ್ರತಿಯೊಬ್ಬ ವ್ಯಕ್ತಿಯೂ ಜೀವನದುದ್ದಕ್ಕೂ ಸಮಾಜ ಸೇವೆಯನ್ನು ನಡೆಸಲಿ ಆ ಕಾರಣಕ್ಕೆ ಕುಟುಂಬವನ್ನು ಮರೆಯದಿರಿ. ಬೆಳಕು ಯಾವ ಭಾಗದಿಂದ ಬಂದರೂ ಸ್ವೀಕರಿಸಿ ಆದರೆ ನಿಂತ ನೆಲ ಕುಸಿಯದಿರಲಿ ಎಂದು ಬ್ಲಡ್ ಹೆಲ್ಪ್ ಕೇರ್ (ರಿ) ಕರ್ನಾಟಕ ಇದರ ಗೌರವ ಅದ್ಯಕ್ಷರಾದ ಸುಲೈಮಾನ್ ಶೇಖ್ ಅಭಿಪ್ರಾಯ ಪಟ್ಟರು.
ಅವರು ನಿನ್ನೆ ಬ್ಲಡ್ ಹೆಲ್ಪ್ ಕೇರ್ (ರಿ)ಕರ್ನಾಟಕ ಇದರ ಮಹಾಸಭೆಯ ನೂತನ ಸಮಿತಿಯ ಆಯ್ಕೆ ಪ್ರಕ್ರಿಯೆ ಯಲ್ಲಿ ಅಧ್ಯಕ್ಷ ಸ್ಥಾನ ವಹಿಸಿ ಮಾತಾಡುತ್ತಿದ್ದರು. ಅಲ್ಲದೆ ಸಂಸ್ಥೆಗೆ ಮುಂದೆ ನೂತನ ಕಛೇರಿಯ ಭರವಸೆಯನ್ನು ನೀಡಿದರು. ನೂತನ ಅದ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ನಝೀರ್ ಹುಸೇನ್ ಮಾತಾಡಿ ಎಲ್ಲರೂ ಒಟ್ಟಾಗಿ ಮುನ್ನಡೆದಲ್ಲಿ ಅಸಾಧ್ಯ ಎಂಬ ಪಧದ ಅ ಎಂಬ ಅಕ್ಷರ ವನ್ನು ಓದ್ದು ಓಡಿಸಿದಲ್ಲಿ ಎಲ್ಲವೂ ಸಾಧ್ಯ ಎಂದರು. ಮುಖ್ಯ ಸಲಹೆಗಾರರಾಗಿ ಫಯಾಝ್ ಆಲಿ ಬೈಂದೂರು ಮಾತಾಡಿ ಕಚ್ಚಾಡುವವರು ಕಚ್ಚಾಡಲಿ ಗುದ್ದಾಡುವವರು ಗುದ್ದಾಡಲಿ ನಮ್ಮ ಗುರಿ ತಲುಪಲು ಪ್ರಯತ್ನ ಮಾಡೋಣ ಎಂದರು.
ಬ್ಲಡ್ ಹೆಲ್ಪ್ ಕೇರ್ ಸಂಸ್ಥೆಯ ಅನಿವಾಸಿ ಸಹೋದರರಾದ ನವಾಝ್ ಹಾಗೂ ಇಫ್ತಿಕಾರ್ ಮುಖ್ಯ ಸಲಹೆಗಾರರಾಗಿ ಆಯ್ಕೆ ಯಾದರು, ಪ್ರಧಾನ ಕಾರ್ಯದರ್ಶಿಯಾಗಿ ಸತ್ತಾರ್ ಪುತ್ತೂರು, ಕೋಶಾಧಿಕಾರಿಯಾಗಿ ಇಂತಿಯಾಝ್ ಬಜಪೆ, ಮೇಲ್ವಿಚಾರಕರಾಗಿ ಸಫ್ವಾನ್ ಕಲಾಯಿ, ಜತೆ ಕಾರ್ಯದರ್ಶಿಯಾಗಿ ಝಾಕಿರ್ ಇಕ್ಲಾಸ್,ಶಂಸುದ್ದೀನ್ ಬಲ್ಕುಂಜೆ,ಸಂಘಟನಾ ಕಾರ್ಯದರ್ಶಿಯಾಗಿ ಬಶೀರ್ ಮಂಗಳೂರು,ಸಂಚಾಲಕರಾಗಿ ನವಾಝ್, ಮಾದ್ಯಮ ಮುಖ್ಯಸ್ಥರಾಗಿ ಅಬ್ದುಲ್ ಹಮೀದ್ ಗೋಳ್ತಮಜಲ್, ಮಾದ್ಯಮ ಕಾರ್ಯದರ್ಶಿ ಯಾಗಿ ಬಾತಿಶ್ ತೆಕ್ಕಾರ್, ರಕ್ತ ಪೂರೈಕೆ ವಿಭಾಗದ ಮುಖ್ಯಸ್ಥರಾಗಿ ಮುಸ್ತಫಾ ಕೆ ಸಿ ರೋಡ್ ಸದಸ್ಯರಾಗಿ ರಾಫಿಝ್, ಅಲ್ಮಾಝ್, ತಸ್ಲಿಂ ಆಯ್ಕೆ ಯಾದರು. ಮಹಾಸಭೆ ನಡೆಸಲು ಕಛೇರಿ ಒದಗಿಸಿ ಕೊಟ್ಟ ಜತೆ ಕಾರ್ಯದರ್ಶಿ ಝಾಕಿರ್ ಇಕ್ಲಾಸ್ ರವರಿಗೆ ಅಭಿನಂದನೆ ಸಲ್ಲಿಸಲಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.