ಪುತ್ತೂರು (www.vknews.in) : ಮೂಲತಃ ಪುತ್ತೂರಿನ ಬನ್ನೂರು ನಿವಾಸಿಯಾಗಿದ್ದ ಪ್ರಸ್ತುತ ಕಾಸರಗೋಡು ಸಮೀಪದ ಕುಂಬ್ಳೆ ಆರಿಕ್ಕಾಡಿ ನಿವಾಸಿಯಾಗಿರುವ ಇಬ್ರಾಹಿಂ ಮುಸ್ಲಿಯಾರ್ ರವರು ಅಲ್ಪದಿನದ ಅನಾರೋಗ್ಯದಿಂದ ರಾತ್ರಿ ವೇಳೆ ನಿಧನರಾದರು.
ಮೃತರು ಸುಮಾರು 38 ವರ್ಷಗಳ ಕಾಲ ಬನ್ನೂರು ಜುಮಾ ಮಸೀದಿಯಲ್ಲಿ ಮು-ಅಝೀನ್ ಆಗಿ ಸೇವೆ ಸಲ್ಲಿಸಿ, ಬಳಿಕ ಹನ್ನೋಂದು ವರ್ಷಗಳ ಕಾಲ ಪುತ್ತೂರಿನ ಪಡೀಲ್ ನ ಜುಮಾ ಮಸೀದಿಯಲ್ಲಿ ಕೂಡಾ ಸೇವೆ ಸಲ್ಲಿಸಿದ್ದರು. ಇವರು ಸಾಜಿದ್, ಬಹುಃ ಹಾಫಿಲ್ ಮುಝಮ್ಮಿಲ್ ಸಖಾಫಿ, ವಾರಿದ್ ಮತ್ತು ಜಾಬೀರ್ ರವರ ತಂದೆ ಹಾಗೂ ಬಹುಃ ಪಿ.ಬಿ ಅಬ್ದುಲ್ ರಹಿಮಾನ್ ಮದನಿ ರವರ ಸಹೋದರ. ಮೃತರ ದಫನ ಕಾರ್ಯ ಬನ್ನೂರಿನಲ್ಲಿ ನಡೆಯಲಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.