(www.vknews.in) : ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಜಾನುವಾರುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ 23 ವರ್ಷದ ಯುವಕನನ್ನು ಗೋರಕ್ಷಕರ ಗುಂಪು ಹೊಡೆದು ಕೊಂದಿದೆ. ಘಟನೆಯಲ್ಲಿ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯನ್ನು ರಾಷ್ಟ್ರೀಯ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಬಂಧಿತರು ಬಜರಂಗದಳದ ಕಾರ್ಯಕರ್ತರಾಗಿದ್ದು, ಕಳೆದ ಶುಕ್ರವಾರ ದಾಳಿ ನಡೆದಿದ್ದರೂ, ಭಾನುವಾರ ಘಟನದೇವಿ ತೋಟದಲ್ಲಿ ಶವ ಪತ್ತೆಯಾದ ಬಳಿಕ ಕ್ರೂರ ಕೃತ್ಯ ಬೆಳಕಿಗೆ ಬಂದಿದೆ. ಜೂನ್ 8 ರಂದು ಅನ್ಸಾರಿ ಮತ್ತು ಇಬ್ಬರು ಸಹಾಯಕರು ಟೆಂಪೋದಲ್ಲಿ ಜಾನುವಾರುಗಳೊಂದಿಗೆ ಹೋಗುತ್ತಿದ್ದಾಗ ಠಾಣಾ ಜಿಲ್ಲೆಯ ಸಹಲ್ಪುರದಲ್ಲಿ ಸುಮಾರು 15 ಕಿರಾತಕರು ಅವರನ್ನು ತಡೆದರು. ಅನ್ಸಾರಿ ಜೊತೆಗಿದ್ದ ಇಬ್ಬರು ಪರಾರಿಯಾಗಿದ್ದರು ಆದರೆ ಅನ್ಸಾರಿ ಬರ್ಬರವಾಗಿ ಹತ್ಯೆಯಾಗಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.