ಪುತ್ತೂರು (www.vknews.in) : ಹನ್ನೊಂದು ತಿಂಗಳ ಪುಟ್ಟ ಮಗುವನ್ನು ಬಿಟ್ಟು ಮಹಿಳೆಯೋರ್ವರು ಪ್ರಿಯಕರನನ್ನು ಹುಡುಕಿಕೊಂಡು ಹುಬ್ಬಳ್ಳಿಯಿಂದ ಪುತ್ತೂರಿನ ಕೋಡಿಂಬಾಡಿಗೆ ಫ್ರೀ ಬಸ್ಸಿನಲ್ಲಿ ಬಂದಿದ್ದಾರೆ. ತನ್ನ ಕೈಯಲ್ಲಿ ಹಣ ಇಲ್ಲದಿದ್ದರೂ ಮಹಿಳೆಗೆ ಸರಕಾರಿ ಬಸ್ನಲ್ಲಿ ಉಚಿತ ಪ್ರಯಾಣ ವರವಾಗಿ ಪರಿಣಮಿಸಿತ್ತು.
ಪುತ್ತೂರಿನಲ್ಲಿ ತೋಟದ ಕೆಲಸ ನಿರ್ವಹಿಸುತ್ತಿದ್ದ ಪ್ರಿಯಕರನನ್ನು ಸಿಕ್ಕ ಬಳಿಕ ಇಬ್ಬರೂ ಅಲ್ಲಿಂದ ಬೇರೆಡೆಗೆ ಪರಾರಿಯಾಗಿದ್ದಾರೆ. ಮಹಿಳೆಯ ಪ್ರೇಮದ ವಿಷಯ ಅರಿತಿದ್ದ ಮನೆಯವರು ಆಕೆ ನಾಪತ್ತೆಯಾದ ಕೂಡಲೇ ಕೋಡಿಂಬಾಡಿಗೆ ಬಂದಿದ್ದಾರೆ. ಮರುದಿನ ಇಬ್ಬರೂ ಸಿದ್ದಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಮಹಿಳೆಯನ್ನು ಹುಬ್ಬಳ್ಳಿಗೆ ವಾಪಸು ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.