ಬೆಂಗಳೂರು (www.vknews.in) : ರಾಜ್ಯ ಸರಕಾರದ ಯೋಜನೆಗಲ್ಲಿ ಒಂದಾದ ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಬಸ್ಸಿನಲ್ಲಿ ಉಚಿತ ಪ್ರಯಾಣದ ಅವಕಾಶ ಇರುವುದರಿಂದ ಹಲವಾರು ಮಹಿಳೆಯರು ಈ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ. ಆದರೆ ಇಲ್ಲೊಬ್ಬರು ಮಹಿಳೆ ಬಸ್ಸಿನಲ್ಲಿ ಉಚಿತ ಪ್ರಯಾಣದ ಯೋಜನೆಯಡಿ, ನಾಲ್ಕು ಐದು ದಿನಗಳ ಕಾಲ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಹಿನ್ನೆಲೆ ಒಂದು ಇಡೀ ಕೆಎಸ್ಆರ್ಟಿಸಿ ಬಸ್ ಅನ್ನೇ ಬುಕ್ ಮಾಡಲು ಬಂದಿದ್ದರು.
ಮೆಜೆಸ್ಟಿಕ್ ನ ಕೆಎಸ್ಆರ್ಟಿಸಿ ವಿಚಾರಣಾ ಕೌಂಟರ್ ನಲ್ಲಿ ಬಂದು ಇಡೀ ಬಸ್ ನ 48 ಸೀಟುಗಳನ್ನು ರಿಸರ್ವ್ ಮಾಡುವ ಬಗ್ಗೆ ವಿಚಾರಿಸಿದ್ದಾರೆ ಎನ್ನಲಾಗಿದೆ. ಆದರೆ ಸರಕಾರ ಯೋಜನೆ ಜಾರಿ ಸಂದರ್ಭದಲ್ಲಿ ಒಂದು ಬಸ್ಸಿನಲ್ಲಿ ಶೇಕಡ 50ರಷ್ಟು ಮಾತ್ರವೇ ಉಚಿತ ಪ್ರಯಾಣಕ್ಕೆ ಮಹಿಳೆಯರಿಗೆ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿತ್ತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.