(www.vknews.in) : ಯು.ಟಿ.ಖಾದರ್ ರವರು ಸಚಿವರಾಗಿ,ದ.ಕ.ಉಸ್ತುವಾರಿಯಾಗುತ್ತಾರೆ ಎಂದು ಭಾವಿಸಿದ್ದ ನಮಗೆಲ್ಲ ಅವರು ಸ್ಪೀಕರ್ ಆದಾಗ ಇದು ಇವರಿಗೆ ತಕ್ಕುದಾದ ಹುದ್ದೆಯೇ ಎಂದೆನಿಸಿತ್ತು.ಯಾಕೆಂದರೆ ಸಂವಿಧಾನಿಕವಾಗಿ ಬಹಳ ಗೌರವ ಇರುವ ಉನ್ನತ ಸ್ಥಾನವಾದರೂ ಸದಾ ಜನರೊಡನೆ ಬೆರೆಯುತ್ತಿರುವ ಯು.ಟಿ.ಯವರು ಕೇವಲ ವಿಧಾನಸೌಧದೊಳಗೆ ಮಾತ್ರ ಸೀಮಿತವಾಗುವ ಹುದ್ದೆಗೆ ಹೇಗೆ ಒಗ್ಗಿಕೊಳ್ಳಬಹುದು ಎಂಬ ಆತಂಕ ನಮಗಿತ್ತು. ಈ ಬಗ್ಗೆ ಆತಂಕ ವ್ಯಕ್ತಪಡಿಸಿ ನಾನು ಪತ್ರಿಕೆಯಲ್ಲಿ ಬರೆದಿದ್ದೆ ಕೂಡ.
ಹೋದಲ್ಲೆಲ್ಲಾ ಇವರನ್ನು ಕಾಣಲು ಹಾತೊರೆಯುತ್ತಿದ್ದ ಜನ ಇನ್ನು ಸ್ವಲ್ಪ ದೂರವಾಗಬಹುದು, ಹಾಗೆಯೇ ಉನ್ನತ ಹುದ್ದೆಯಾದ್ದರಿಂದ ಯು.ಟಿ.ಯವರೂ ಜನರಿಂದ ಅಂತರ ಕಾಯ್ದುಕೊಳ್ಳಬಹುದೆಂಬ ಭಯ ಇತ್ತು. ಆದರೆ ಇಂದು ( 18-6-2023 ರ ಆದಿತ್ಯವಾರ ) ಮುಡಿಪು ನಾಗರಿಕ ಸಮಿತಿ ವತಿಯಿಂದ ಮುಡಿಪು ಅಡಿಟೋರಿಯಂ ನಲ್ಲಿ ನಡೆದ ಸಾರ್ವಜನಿಕ ಸನ್ಮಾನ ಕಾರ್ಯಕ್ರಮ ನೋಡುವಾಗ ಯು.ಟಿ.ಖಾದರ್ ಹುದ್ದೆಯಲ್ಲಿ ಬಹಳ ಎತ್ತಕ್ಕೇರಿದಂತೆ ಜನಪ್ರಿಯತೆಯಲ್ಲೂ ಮೇಲೆಯೇ ಇದ್ದಾರೆ ಎಂದೆನಿಸಿ ಹೆಮ್ಮೆಯಾಯಿತು.
ಅವರು ಕಾರಿನಿಂದ ಇಳಿಯುತ್ತಿದ್ದಂತೆಯೇ ಎಂದಿನಂತೆ ಜನ ಹಸ್ತಲಾಘವಕ್ಕೆ,ಸೆಲ್ಫಿಗೆ ಮುಗಿ ಬಿದ್ದದ್ದು ಕಂಡು ಬಂತು.ಅವರ ಅಂಗರಕ್ಷಕರು ಸುತ್ತುವರಿದು ಯಾರೂ ಅವರನ್ನು ಸ್ಪರ್ಷಿಸಿದಂತೆ ಎಚ್ಚರಿಸುತ್ತಿದ್ದರೂ ಅಭಿಮಾನಿಗಳು ಕೇಳುವ ಸ್ಥಿತಿಯಲ್ಲರಲಿಲ್ಲ. ವ್ಯಕ್ತಿಯೊಬ್ಬ ಜನರ ಹೃದಯಕ್ಕೆ ಹತ್ತಿರವಾದರೆ ಸ್ಥಾನ, ಜನಜಂಗುಳಿ,ಅಂಗರಕ್ಷಕರು ಯಾವುದೂ ಗಣನೆಗೆ ಬರುವುದಿಲ್ಲ ಎನ್ನುವುದಕ್ಕೆ ಇಂದು ಮುಡಿಪು ವಿನಲ್ಲಿ ನಡೆದ ನಾಗರಿಕ ಸನ್ಮಾನದಲ್ಲಿ ಕಂಡ ಜನಸ್ತೋಮವೇ ಸಾಕ್ಷಿಯಾಗಿದೆ. ಅಂಗರಕ್ಷಕರು, ಪೊಲೀಸ್ ಭದ್ರತೆ ಹೆಚ್ಚಿದ್ದು ಬಿಟ್ಟರೆ ಉಳಿದಂತೆ ಯು.ಟಿ.ಖಾದರ್ ರವರು ಅಭಿಮಾನಿಗಳ ಎಂದಿನ ಸರಳತೆಯ ಯು.ಟಿ.ಯೇ ಆಗಿದ್ದಾರೆ
ಮೊಬೈಲ್ ಕರೆ ಮಾಡಿದರೆ ಈ ಮೊದಲಿನಂತೆ ಉತ್ತರಿಸುವ ಮೂಲಕ ಹುದ್ದೆ ಮಾತ್ರ ಬದಲಾಗಿದೆ ಹೊರತು ವ್ಯಕ್ತಿತ್ವ ಅಲ್ಲ ಎಂದು ತೋರಿಸಿಕೊಟ್ಟಿದ್ದಾರೆ ಭಗವಂತ ಅವರ ಸ್ಥಾನವನ್ನು ಇನ್ನಷ್ಟು ಉನ್ನತಿಗೇರಿಸಲಿ.
✍️ ಅಬೂಬಕರ್ ಅನಿಲಕಟ್ಟೆ ವಿಟ್ಲ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.