ಕಣ್ಣೂರು (www.vknews.in) ; ಮುಳಪಿಲಂಗಾಟ್ ಎಂಬಲ್ಲಿ ಮೂರನೇ ತರಗತಿ ವಿದ್ಯಾರ್ಥಿನಿಗೆ ನಾಯಿ ಕಚ್ಚಿದೆ. ಮುಳಪಿಲಂಗಾಡ್ ಪಂಚಾಯತ್ ವ್ಯಾಪ್ತಿಯ ಎಡಕ್ಕಾಡ್ ರೈಲು ನಿಲ್ದಾಣದ ಬಳಿ ಬಾಬು ಅವರ ಪುತ್ರಿ ಜಾನ್ವಿಯಾ (ಎಂಟು) ನಾಯಿ ಕಚ್ಚಿದ ವಿದ್ಯಾರ್ಥಿನಿ. ಸೋಮವಾರ ಸಂಜೆ ಈ ಘಟನೆ ನಡೆದಿದೆ. ಈಕೆ ಮುಳಪಿಲಂಗಾಡ್ ವೆಸ್ಟ್ ಎಲ್ ಪಿ ಶಾಲೆಯ ವಿದ್ಯಾರ್ಥಿನಿ. ಘಟನೆಯ ಬೆಚ್ಚಿಬೀಳಿಸುವ ಸಿಸಿಟಿವಿ ದೃಶ್ಯಾವಳಿ ಕೂಡ ಬಿಡುಗಡೆಯಾಗಿದೆ. ಶಾಲೆಯಿಂದ ಬಂದ ಬಳಿಕ ಮನೆಯಲ್ಲಿ ಆಟವಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ನಾಯಿ ಕೈಕಾಲುಗಳಿಗೆ ಕಚ್ಚಿದೆ. ಗಾಯಗೊಂಡ ವಿದ್ಯಾರ್ಥಿನಿಯನ್ನು ಚಾಲಾ ಜಿಮ್ ಕೇರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂರು ನಾಯಿಗಳು ಮಗುವನ್ನು ಎಳೆದಾಡಿ ದಾಳಿ ಮಾಡುತ್ತಿರುವ ದೃಶ್ಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಸ್ಪಷ್ಟವಾಗಿದೆ. ತಂದೆ ಮತ್ತು ನೆರೆಹೊರೆಯವರು ಓಡಿ ಬಂದಾಗ ನಾಯಿಗಳು ಓಡಿಹೋದವು. ಮಗು ಅಪಾಯದಿಂದ ಪಾರಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಮಾಹಿತಿ ತಿಳಿದ ಎಡಕ್ಕಾಡ್ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.