ಕೇರಳ (www.vknews.in) ; ಹಲವು ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿರುವ ಅತುಲ್ ಎನ್ನವ ವ್ಯಕ್ತಿ ಮನೆಗೆ ನುಗ್ಗಿ ಮಹಿಳೆಯನ್ನು ಕಡಿದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೀಕೋಜೂರು ಪುಲ್ಲಿಕಾಟಿಲ್ಪಾಡಿ ಮಲಾರವಾಡಿ ಜಂಕ್ಷನ್ ಬಳಿಯ ರಜಿತಮೋಳ್ (27) ಮೃತರು.
ತಡೆಯಲು ಮುಂದಾದಾಗ ಮಹಿಳೆಯ ತಂದೆ, ತಾಯಿ ಮತ್ತು ಸಹೋದರಿಯ ಮೇಲೆ ಹಲ್ಲೆ ನಡೆದಿದೆ. ಅವರ ಗಾಯಗಳು ಗಂಭೀರವಾಗಿವೆ. ರಜಿತಾಮೋಳ್ ಅವರ ತಂದೆ ವಿಎ ರಾಜು (60), ತಾಯಿ ಗೀತಾ (51) ಮತ್ತು ಸಹೋದರಿ ಅಪ್ಪು (18) ಚೂರಿ ಇರಿತಕ್ಕೊಳಗಾದವರು.
ರನ್ನಿ ಗ್ರಾಮ ಪಂಚಾಯತ್ನ ಅತುಲ್ ಸತ್ಯನ್ ಎನ್ನುವವನು ಮೂವರ ಮೇಲೆ ದಾಳಿ ನಡೆಸಿದ್ದಾನೆ. ಶನಿವಾರ ಸಂಜೆ 7:30ಕ್ಕೆ ಈ ಘಟನೆ ನಡೆದಿದೆ. ಅತುಲ್ ಚಾಕುವಿನೊಂದಿಗೆ ಮನೆಗೆ ನುಗ್ಗಿ ರಜಿತಾಳನ್ನು ಕಡಿದು ಕೊಲೆ ಮಾಡಿದ್ದಾನೆ. ತಡೆಯಲು ಬಂದಾಗ ಉಳಿದವರಿಗೆ ಕಡಿದಿದ್ದಾನೆ.
ರಜಿತಾ ಅವರನ್ನು ರಾನ್ನಿ ತಾಲೂಕು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಅವರು ಮೃತಪಟ್ಟಿದ್ದರು. ವಾರದ ಹಿಂದೆ ರಜಿತಾಳನ್ನು ಪಠಾಣಾಪುರದ ರಬ್ಬರ್ ತೋಟಕ್ಕೆ ಕರೆದೊಯ್ದು ಕುತ್ತಿಗೆಗೆ ಚಾಕು ತೋರಿಸಿ ಈತ ಬೆದರಿಸಿದ್ದ ಎನ್ನಲಾಗಿದೆ. ರಂಜಿತಾ ತಂದೆ ರಾಜು ಅವರಿಗೆ ತುರ್ತು ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮಹಿಳೆಗೆ ಈ ಹಿಂದೆ ಪರಿಚಯವಿರುವ ಅತುಲ್ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಘಟನೆ ಬಳಿಕ ಬೈಕ್ ನಲ್ಲಿ ಪರಾರಿಯಾಗಿರುವ ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.