ಕೋಝಿಕ್ಕೋಡ್(ವಿಶ್ವಕನ್ನಡಿಗ ನ್ಯೂಸ್): ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎಪಿ ಅಬೂಬಕರ್ ಮಸ್ಲಿಯಾರ್ ಅವರು ಇಂದು ಮಲೇಷ್ಯಾ ಪ್ರಧಾನಿಯವರನ್ನು ಬೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಮಲೇಷ್ಯಾ ಪ್ರಧಾನ ಮಂತ್ರಿ ಅನ್ವರ್ ಇಬ್ರಾಹೀಂ ಅವರ ವಿಶೇಷ ಆಹ್ವಾನದ ಮೇರೆಗೆ ಎಪಿ ಉಸ್ತಾದರು ಇಂದು ವಿಶೇಷ ವಿಮಾನದ ಮೂಲಕ ಮಲೇಷ್ಯಾ ತಲುಪಿದ್ದಾರೆ.
ಸುಧೀರ್ಗ ಸಮಯದ ವಿಶ್ರಾಂತಿಯ ಬಳಿಕ ಇಂದು ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ರವರು ವಿದೇಶ ಪ್ರಯಾಣ ಬೆಳೆಸಿದ್ದು, ಅವರು ಮಲೇಷಿಯಾದ ವಿವಿಧ ಕಡೆಗಳಲ್ಲಿ ನಡೆಯುವ ಸರ್ಕಾರಿ ಕಾರ್ಯಕ್ರಮಗಲ್ಲಿ ಭಾಗವಹಿಸಲಿದ್ದಾರೆ.
ಜುಲೈ 22 ರಂದು ಸಹೀಹುಲ್ ಬುಖಾರಿ ವಿದ್ವಾಂಸರ ಸಮ್ಮೇಳನದಲ್ಲಿ ಮುಖ್ಯ ಪ್ರಭಾಷಣ ಮಾಡಿಲಿದ್ದಾರೆ. ಮರ್ಕಝ್ ನಾಲೆಡ್ಜ್ ಸಿಟಿ ಮ್ಯಾನೇಜಿಂಗ್ ಡೈರಕ್ಟರ್ ಅಬ್ದುಲ್ ಹಕೀಂ ಅಝ್ಹರಿ ಜೊತೆಗಿದ್ದಾರೆ.
ಮಲೇಷ್ಯಾ ತಲುಪಿದಾಗ ಆತ್ಮೀಯವಾಗಿ ಸ್ವಾಗತಿಸುವುದರೊಂದಿಗೆ ಆತಿಥ್ಯ ಎಲ್ಲವೂ ನನಗೆ ತುಂಬಾ ಸಂತೋಷವನ್ನು ತಂದಿದೆ ಎಂದು ಕಾಂತಪುರಂ ಎಪಿ ಉಸ್ತಾದರು ಮಾಧ್ಯಮದಲ್ಲಿ ಹಂಚಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.