(www.vknews.in) : ಮೂರು ವರ್ಷದ ಬಾಲಕ ಮನೆಯ ತಾರಸಿ ಮೇಲಿದ್ದ ಈಜುಕೊಳಕ್ಕೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ಅಜಾನೂರು ಮಾಣಿಕೋತ್ ಆಯೇಷಾ ಮನ್ಸಿಲ್ನ ನಿವಾಸಿ, ಅನಿವಾಸಿ ಉದ್ಯೋಗಿ ಆಶಿಂ ಮತ್ತು ತಸ್ಲೀಮಾ ದಂಪತಿಯ ಪುತ್ರ ಹಾದಿ ಮೃತಪಟ್ಟ ಮಗು. ಹಾಶಿಂ ಅವರ ಸಹೋದರ ಶಫಿ ಅವರ ಮನೆಯಲ್ಲಿ ಮಂಗಳವಾರ ಬೆಳಗ್ಗೆ ಈ ದುರ್ಘಟನೆ ನಡೆದಿದೆ.
ಮನೆಯ ಮೇಲಿನ ಮಹಡಿಯಲ್ಲಿ ಆಟವಾಡುತ್ತಿದ್ದಾಗ ಮಗು ಆಕಸ್ಮಿಕವಾಗಿ ಈಜುಕೊಳಕ್ಕೆ ಬಿದ್ದಿದ್ದು, ಕೂಡಲೇ ಮಗುವನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಾಣ ಉಳಿಸಲಾಗಲಿಲ್ಲ. ವಿದೇಶದಲ್ಲಿದ್ದ ಮಗುವಿನ ತಂದೆ ಹಾಶಿಮ್ ಅವರು ರಜೆಯಲ್ಲಿ ತಾಯ್ನಾಡಿಗೆ ತೆರಳಿ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಾಗ ಪುತ್ರನ ಸಾವಿನ ಸುದ್ದಿ ಬಂದಿದೆ. ಮಗುವಿನ ಸಾವು ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ಕಣ್ಣೀರು ತರಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.