(www.vknews.in) ಮಂಗಳೂರು: SKSBV ಕಲ್ಲಡ್ಕ ಶಾಖೆಯ ವತಿಯಿಂದ ಮುಅಲ್ಲಿಂ ದಿನವನ್ನು ಮುನೀರುಲ್ ಇಸ್ಲಾಂ ಮದರಸದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸಮಸ್ತದ ಅಗಲಿದ ನೇತಾರರ ಹೆಸರಿನಲ್ಲಿ ಪ್ರಾರ್ಥನೆ ನಡೆಸಲಾಯಿತು.
ಕಲ್ಲಡ್ಕ ಕೇಂದ್ರ ಜುಮಾ ಮಸೀದಿ ಖತೀಬರಾದ ಉಸ್ಮಾನ್ ದಾರಿಮಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮದರಸ ಮುಖ್ಯೋಪಾಧ್ಯಾಯರಾದ ಲತೀಫ್ ದಾರಿಮಿ, ಮುಅಲ್ಲಿಂ ದಿನದ ಮಹತ್ವವನ್ನು ವಿವರಿಸಿ ಆಗಮಿಸಿದ ಸರ್ವರನ್ನೂ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಮಸೀದಿ ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬೂಬಕರ್ ಸಾಹಿಬ್, ಕೋಶಾಧಿಕಾರಿ ನವಾಝ್ ಕೆ. ಎನ್, ಜೊತೆ ಕಾರ್ಯದರ್ಶಿ ಸಾದಿಕ್, ನಾಸಿರ್ ಮುಸ್ಲಿಯಾರ್, ಮದರಸ ಅಧ್ಯಾಪಕ ವೃಂದದವರು, ಊರಿನ ಹಿರಿಯರು ಹಾಗೂ SKSBV ಪದಾಧಿಕಾರಿಗಳು ಭಾಗವಹಿಸಿದ್ದರು. ರಹಮಾನ್ ದಾರಿಮಿ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.