(www.vknews.in) ಕೊಳ್ನಾಡು ಗ್ರಾಮದ ನಾರ್ಶದಲ್ಲಿ ನಡೆದ ಭೂವಿವಾದಕ್ಕೆ ಸಂಬಂದಿಸಿದಂತೆ ನಾರ್ಶ ನಿವಾಸಿಯಾದ ಇಬ್ರಾಹಿಂ ಎಂಬುವವರ ಕುಟುಂಬದ ಜಮೀನಿನನ್ನು ಕಳೆದ 2 ವರ್ಷಗಳಿಂದ ಮೊದಲೇ ಸ್ವಲ್ಪ ಸ್ವಲ್ಪವಾಗಿ ಅಕ್ರಮಿಸಿಕೂಂಡು ಬರುತ್ತಿರುವ ಸ್ಥಳೀಯ ನಿವಾಸಿ ಆಳದಡಿ ಇಸ್ಮಾಯಿಲ್ ಹಾಗೂ ಅವರ ಮಕ್ಕಳಾದ ಸುಲೈಮಾನ್,ಅಶ್ರಪ್,ಹನೀಪ್ ಎಂಬುವವರು ಕಳೆದ ವಾರ ಅಡಿಕೆ ಗಿಡವನ್ನು ಕಿತ್ತುಹಾಕಿ ಅಕ್ರಮವಾಗಿ ರಸ್ತೆ ನಿರ್ಮಿಸಿದ್ದಲ್ಲದೆ,ಕೇಳಲು ಹೋದಾಗ ನಿಮ್ಮ ಜಾಗ ಅಲ್ಲವೆಂದು ಹೊಡೆದದಲ್ಲದೆ ಹೆಣ್ಣು ಮಕ್ಕಳನ್ನು ಕಳುಹಿಸಿ ಅವರ ಮುಖಾಂತರ ಬೈಯಲಿಕ್ಕೆ ಹೇಳಿ, ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಹೊಡೆದಂತೆ ಕಾಣುವ ಎಡಿಟ್ ಮಾಡಿದ ವಿಡಿಯೋವನ್ನು ಪ್ರಚಾರ ಮಾಡಿದ್ದಾರೆ. ಅದೂ ಅಲ್ಲದೆ ಹೊರಗಡೆಯಿಂದ ಕರೆ ಮಾಡಿಸಿ ಕಾಲೇಜಿಗೆ ಹೋಗುವ ಮಕ್ಕಳಿಗೆ ಜೀವಬೆದರಿಕೆಯೊಡ್ಡಿರುತ್ತಾರೆ.ಈ ಸಂಬಂಧ ವಿಟ್ಲ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.