ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಉಡುಪಿಯ ಖಾಸಗಿ ಕಾಲೇಜು ಫೋಟೋ ಶೂಟ್ ಪ್ರಕರಣ ಈಗಾಗಲೇ ಒಂದು ತಾರ್ಕಿಕ ಅಂತ್ಯ ಕಂಡಿದ್ದು, ಸಂಘ ಪರಿವಾರ ಮುಗಿದು ಹೋದ ಈ ಘಟನೆಗೆ,ಮತೀಯ ವಿದ್ವೇಶ ಸೃಷ್ಟಿಸಿ ಕೋಮು ಗಲಭೆ ಪ್ರಚೋದಿಸಲು ಪ್ರಯತ್ನಿಸುತ್ತಿದೆ. ಚುನಾವಣೆಯಲ್ಲಿ ಪರಾಜಿತ ಸಂಘ ಪರಿವಾರಕ್ಕೆ ಪ್ರಸ್ತುತ ಇಂತಹ ನಗಣ್ಯ ಘಟನೆಯನ್ನು ಉದ್ದಕ್ಕೆ ಎಳೆದು ಮೈಲೇಜ್ ಪಡೆಯಲು ಪ್ರಯತ್ನಿಸುತ್ತಿದ್ದು, ಘಟನೆಯನ್ನು ಕೂಮೀಕರಣ ಗೊಳಿಸಲು ವೈದಿಕ ವರ್ಗವು ಶತಾಯ ಗತಾಯ ಶ್ರಮಿಸುತ್ತಿದ್ದು,ಉಡುಪಿಯಲ್ಲಿ ಯಾಷ್ಪಾಲ್ ಮತ್ತು ದ.ಕ.ಜಿಲ್ಲೆಯಲ್ಲಿ ಶರಣ್ ರನ್ನು ಮುಸ್ಲಿಮರ ವಿರುದ್ಧ ಛೂ ಬಿಡುತ್ತಿದ್ದಾರೆ.
ಮತೀಯ ಅಲ್ಪ ಸಂಖ್ಯಾತರ ವಿರುದ್ಧ ಕೋಮು ಗಲಭೆಗಳನ್ನು ಪ್ರಮುಖ ಅಸ್ತ್ರವಾಗಿ ಬಳಸುತ್ತಿರುವ ವೈದಿಕ ವರ್ಗ, ಹಿಂದುಳಿದ ವರ್ಗದ ಕೋಲು ನಾಯಕರನ್ನು ಸ್ಥಳೀಯವಾಗಿ ಮುಸ್ಲಿಮರ ಮತ್ತು ಕ್ರೈಸ್ತರ ವಿರುದ್ಧ ಬಳಕೆ ಮಾಡಿ ಫಸಲು ಕೊಯ್ಯುವ ಷಡ್ಯಂತ್ರ ರೂಪಿಸಿದ್ದಾರೆ. ಮತೀಯ ವಿದ್ವೇಶ ಭಾಷಣ ಮಾಡುವ ಇಂತಹ ಕೋಲು ನಾಯಕರ ವಿರುದ್ಧ ಪೊಲೀಸರು ಮತೀಯ ನಿಂದನೆ ಪ್ರಕರಣ ದಾಖಲಿಸಿ ಬಂಧಿಸಬೇಕಿದೆ.
ಕೆ.ಅಶ್ರಫ್ (ಮಾಜಿ ಮೇಯರ್) ಅಧ್ಯಕ್ಷರು. ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.