ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಉಡುಪಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮಧ್ಯೆ ನಡೆದಂತಹ ಕ್ಷುಲ್ಲಕ ವಿಚಾರವನ್ನು ಎದುರಿಟ್ಟು ವಿಶ್ವ ಹಿಂದೂ ಪರಿಷತ್ ಪ್ರತಿಭಟನೆ ಯನ್ನು ಹಮ್ಮಿಕೊಂಡಿತು.
ಈ ಸಂಧರ್ಭದಲ್ಲಿ ಭಾಷಣ ಮಾಡುತ್ತಾ ಶರಣ್ ಪಂಪ್ವೆಲ್ ಕರ್ನಾಟಕ ಸರ್ಕಾರದ ಸಭಾಧ್ಯಕ್ಷರಾದ ಯುಟಿ ಖಾದರ್ ರನ್ನು ಉದ್ದೇಶಿಸಿ ಬೆದರಿಕೆ ಹಾಕಿದ್ದಲ್ಲದೆ ಮುಸ್ಲಿಂ ಸಮುದಾಯವನ್ನು ನಿಂದಿಸಿದ್ದಾನೆ. ಸೌಟು,ಪೊರಕೆ ಹಿಡಿಯುವ ಮಹಿಳೆಯರು ಇನ್ನು ಮುಂದೆ ಕೈಯಲ್ಲಿ ತಲವಾರು ಖಡ್ಗಗಳನ್ನು ಹಿಡಿಯ ಬೇಕೆಂದು ಪ್ರಚೋದನೆ ಭಾಷಣ ಮಾಡಿದ್ದರು.ಇವನ ಮೇಲೆ ಸುಮೋಟೋ ಕೇಸ್ ದಾಖಲಿಸಿ ಒದ್ದು ಒಳಗೆ ಹಾಕಬೇಕೆಂದು ಪೊಲೀಸ್ ಕಮಿಷನರ್ ರನ್ನು ಮನವಿ ಮಾಡುವುದಾಗಿ ಹೇಳಿದ್ದಾರೆ
ಸೌಟು,ಪೊರಕೆ ಹಿಡಿಯುವ ಮಹಿಳೆಯರ ಕೈಗಳಿಗೆ ಕಾಂಗ್ರೆಸ್ ಗ್ರಹ ಜ್ಯೋತಿ, ಗ್ರಹ ಲಕ್ಷ್ಮೀ ಯನ್ನು ನೀಡಿದೆ ಶರಣ್ ನೀನು ಬೆಂಬಲಿಸುವ ನಿನ್ನನ್ನು ಪೋಷಿಸುವ ಪಕ್ಷ ಇನ್ನೂ ಕೂಡ ಮಹಿಳೆಯರ ಕೈ ಗಳಿಗೆ ತಲವಾರು,ಕತ್ತಿಗಳನ್ನು ನೀಡಿ ಜೈಲಿನಲ್ಲಿ ಕೊಳೆಯುವಂತಹಾ ಪರಿಸ್ಥಿತಿ ಯನ್ನು ನಿರ್ಮಾಣ ಮಾಡಲು ನಿಮ್ಮ ಪಕ್ಷ ನಿಮ್ಮಿಂದ ಪ್ರೇರೇಪಿಸುತ್ತಿದೆ.
ನಿಮ್ಮ ಪಕ್ಷದ ನಾಯಕರ ಮಹಿಳೆಯರು ಮೊದಲು ತಲವಾರು ಕತ್ತಿಗಳನ್ನು ಹಿಡಿದು ಸಮಾಜದ ಮುಂದೆ ಬರಲಿ ಆಮೇಲೆ ಸಾಮಾನ್ಯ ಕಾರ್ಯಕರ್ತರು ಬರಬಹುದು…
ನಿಮ್ಮ ನಾಯಕರ ಹೆಣ್ಣು ಮಕ್ಕಳು ಅಂತರಾಷ್ಟ್ರೀಯ ಶಾಲಾ ಕಾಲೇಜುಗಳಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರಬೇಕು. ಸಾಮಾನ್ಯ ಕಾರ್ಯಕರ್ತರ ಹೆಣ್ಣು ಮಕ್ಕಳು ಬೀದಿಪಾಲಾಗ ಬೇಕೆಂಬುವುದೇ ನಿಮ್ಮ ನಿಜವಾದ ಮನಸ್ಥಿತಿ.
ಅತ್ಯಾಚಾರಕ್ಕೊಳಗಾಗಿ ಸಾವಿಗೀಡಾದ ನಮ್ಮ ತಂಗಿ ಸೌಜನ್ಯ ಸಾವಿಗೆ ನ್ಯಾಯ ಕೇಳಲು ನಿಮ್ಮ ನಾಲಗೆ ಸತ್ತಿದೆ….
ಮಣಿಪುರ ದಲ್ಲಿ ನಡೆಯುತ್ತಿರುವಂತಹಾ ಅತ್ಯಾಚಾರ,ಕೊಲೆ ನಿಮ್ಮ ಕಣ್ಣಿಗೆ ಕಾಣಿಸುವಿದಿಲ್ಲ.
ನಿಮ್ಮ ಸಂಘಟನೆಯ ಕಾರ್ಯಕರ್ತರು ಅತ್ಯಾಚಾರ ಮಾಡಿದರೆ ಪ್ರತಿಭಟನೆ ಇಲ್ಲ.
ನಿಮ್ಮ ಸಂಸ್ಥೆಯ ಮೇಲ್ವಿಚಾರಕ ಅತ್ಯಾಚಾರ ಮಾಡಿದರೆ ಅತ್ಯಾಚಾರ ಮಾಡಿದ ಮಹಿಳೆಗೆ ಶೋಷಣೆ.
ಮೊದಲು ನೀವು ಮಾನವರಾಗಿ ಮನುಷ್ಯ ಧರ್ಮವನ್ನು ಪಾಲಿಸಿ ರಾಜಕೀಯ ನಾಯಕರ ಬಿಸ್ಕೆಟ್ನಿಂದ ಹೊರಬಂದು ಅತ್ಯಾಚಾರ, ಕೊಲೆಗಳನ್ನು ಧರ್ಮದ ದ್ರಷ್ಠಿಕೋಣದಲ್ಲಿ ನೋಡದೆ ಎಲ್ಲರನ್ನೂ ಅಪರಾಧಿ ಗಳೆಂದು ನೋಡಿರಿ… ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಮಿಕ ಘಟಕ ಇದರ ರಾಜ್ಯ ಕಾರ್ಯದರ್ಶಿ ಯಾದ ವಹ್ಹಾಬ್ ಕುದ್ರೋಳಿ ವಾಗ್ದಾಳಿ ನಡೆಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.