ಬಂಟ್ವಾಳ(ವಿಶ್ವಕನ್ನಡಿಗ ನ್ಯೂಸ್): ಬಂಟ್ವಾಳ ಠಾಣಾ ವ್ಯಾಪ್ತಿಯ ಪಾಣೆಮಂಗಳೂರಿನ ಸಮೀಪದ ನರಿಕೊಂಬು ಗ್ರಾಮದ ಆರ್ ಎಸ್ ಎಸ್ ಮುಖಂಡ ಹಾಗೂ ಭೂಮಾಲೀಕನಗಿದ್ದ ನಾರಾಯಣ ಸೋಮಯಾಜಿ ಎಂಬಾತನು 1995 ಅಕ್ಟೋಬರ್ 24 ರಂದು ತನ್ನ ಜಮೀನಿನಲ್ಲಿ ಆರ್ ಎಸ್ ಎಸ್ ನ ಬೈಟೆಕ್ ಆಯೋಜಿಸಿದ್ದನು, ಮತ್ತು ಗ್ರಾಮದ ದಿನಗೂಲಿ ಕಾರ್ಮಿಕರಿಬ್ಬರಾದ ಗುರುವಪ್ಪ ಹಾಗೂ ರಮೇಶ ಎಂಬುವವರಿಗೆ ಆ ಬೈಟೆಕ್ ನಲ್ಲಿ ಪಾಲ್ಗೊಳ್ಳುವಂತೆ ಹಾಗೂ ಸುತ್ತಮುತ್ತಲಿನ ಹಿಂದೂ ಯುವಕರನ್ನು ಸೇರಿಸುವಂತೆ ಸೂಚಿಸಿದ್ದನು, ಆದರೆ ಗುರುವಪ್ಪ ಹಾಗೂ ರಮೇಶ ಭೂಮಾಲೀಕನ ಈ ಆಜ್ಞೆಗೆ ಒಪ್ಪದೇ ಬೈಟೆಕ್ ನಲ್ಲಿ ಪಾಲ್ಗೊಂಡಿರಲಿಲ್ಲ, ಇದನ್ನೇ ಕಾರಣವಾಗಿಟ್ಟುಕೊಂಡು ಆ ಇಬ್ಬರು ಕಾರ್ಮಿಕರಿಗೆ ಅಂದಿನ ಪಾಲೇಗಾರರ ಶೈಲಿಯಲ್ಲಿ ಹಲ್ಲೆ, ದೌರ್ಜನ್ಯ, ಹಾಗೂ ತಲೆ ಬೋಳಿಸಿ, ಬಣ್ಣ ಹಚ್ಚಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿ ಮೆರವಣಿಗೆ ಮಾಡಿ ಕೊನೆಗೆ ಗ್ರಾಮಸ್ಥರಿಗೆ ಅನುಮಾನ ಬರಬಾರದೆಂದು ಅವರ ಮೇಲೆ ಅಡಿಕೆ ಕದ್ದಿರುವ ಆರೋಪ ಹಾಕಿದ ಸಂಘಪರಿವಾರದ ಹೇಯ ಕೃತ್ಯವಿದು.
1995 ರಲ್ಲಿ ನಡೆದ ಆ ಘಟನೆಯ ಪ್ರಮುಖ ಆರೋಪಿಗಳಾದ ಭೂಮಾಲೀಕ ನಾರಯಣ ಸೋಮಯಾಜಿ ಮತ್ತವನ ಸಾಚಾಗಳಾದ ಪದ್ಮನಾಭ, ವಿಠಲ, ಸುರೇಶ ಸಪಲ್ಯ ಎಂಬವರ ಮೇಲೆ ಅಂದು ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಅಲ್ಲದೇ ಈ ಪ್ರಕರಣದ ಆರೋಪಿಗಳ ವಿರುದ್ಧ ನ್ಯಾಯಾಲಯದಲ್ಲಿ ಅರೋಪ ಕೂಡ ಸಾಬೀತಾಗಿತ್ತು. ಆದರೆ ಪ್ರಕರಣದ ಮೂರನೇ ಆರೋಪಿ ಪದ್ಮನಾಭ ಪೋಲಿಸರಿಗೆ ಸಿಗದೆ ತಲೆಮರೆಸಿಕೊಂಡು ಬೆಂಗಳೂರಿನಲ್ಲಿ ನೆಲೆಸಿದ್ದ ಮಾತ್ರವಲ್ಲ ಸರಕಾರವನ್ನು ವಂಚಿಸಿ ಸರಕಾರಿ ಉದ್ಯೋಗ ಕೂಡ ಪಡೆದಿದ್ದ.
ಸುಮಾರು 28 ವರ್ಷಗಳಿಂದ ಈ ಪ್ರಕರಣದ ತಲೆಮರೆಸಿರುವ ಆರೋಪಿ ಪದ್ಮನಾಭನಿಗೆ ನ್ಯಾಯಾಲಯ ಬಂಧನದ ವಾರೆಂಟ್ ಜಾರಿ ಮಾಡುತ್ತಿದ್ದರೂ ಇದುವರೆಗೂ ಯಾವ ಪೋಲಿಸ್ ಅಧಿಕಾರಿಯೂ ಈತನನ್ನು ಬಂಧಿಸುವಲ್ಲಿ ಶ್ರಮವಹಿಸಿರಲಿಲ್ಲ. ಇದಕ್ಕೆ ನಾರಯಣ ಸೋಮಯಾಜಿ ಮತ್ತು ಆತನ ಪರಮಾಪ್ತ ಕಲ್ಲಡ್ಕ ಪ್ರಭಾಕರ ಭಟ್ ಪ್ರಭಾವವೇ ಕಾರಣ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
28 ವರ್ಷ ಕಳೆದ ನಂತರ ಈ ಪ್ರಕರಣವನ್ನು ಸಿನಿಮೀಯ ಶೈಲಿಯಲ್ಲಿ ಕೇವಲ ಆ ಗ್ರಾಮದ ಬೀಟ್ ಸಿಬ್ಬಂದಿ ಪ್ರವೀಣ್ ಎನ್ನುವವರು ಲಾಂಗ್ ಪೆಂಡಿಂಗ್ ಕೇಸ್ ನ ಹಿಂದೆ ಕಳೆದ ಒಂದು ವರ್ಷಗಳಿಂದ ಮಾಹಿತಿ ಕಲೆ ಹಾಕಿ ಆರೋಪಿಯನ್ನು ಪತ್ತೆ ಹಚ್ಚಿರುತ್ತಾರೆ, ಅಲ್ಲದೇ ಆ ವಾರೆಂಟ್ ಅಸಾಮಿಯನ್ನು ಬೆಂಗಳೂರಿನಿಂದ ಬಂಧಿಸಿ ಠಾಣಗೆ ಒಪ್ಪಿಸಿರುವ ರೋಚಕ ಬೆಳವಣಿಗೆ ಇಂದು ನಡೆದಿದೆ. ಬೀಟ್ ಸಿಬ್ಬಂದಿ ಪ್ರವೀಣ್ ಅವರು ಮತ್ತು ಜೊತೆ ಸಿಬ್ಬಂದಿ ಗಣೇಶ್ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.