ಕಾಸರಗೋಡು(ವಿಶ್ವಕನ್ನಡಿಗ ನ್ಯೂಸ್): ಬಿಲ್ಡಪ್ ಕಾಸರಗೋಡು ಸೊಸೈಟಿ ಜುಲೈ 30, 2023 ರಂದು ನಡೆಸಿದ ಸ್ವಾಗತ ಸಮಾರಂಭದಲ್ಲಿ ಕರ್ನಾಟಕ ವಿಧಾನಸಭಾಧ್ಯಕ್ಷರಾದ ಶ್ರೀ ಯು.ಟಿ.ಖಾದರ್ ಫರೀದ್ ಮಾತನಾಡಿ, ಕಾಸರಗೋಡು ಜಿಲ್ಲೆಯು ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಅಭಿವೃದ್ಧಿ ಸಾಮರ್ಥ್ಯವನ್ನು ಹೊಂದಿದೆ.
ಮಂಗಳೂರು ಮತ್ತು ಕಣ್ಣೂರು ವಿಮಾನ ನಿಲ್ದಾಣಗಳ ಉಪಸ್ಥಿತಿ, ಮಂಗಳೂರು ಸಮುದ್ರ ಬಂದರು ಸೇವೆ, ಜಿಲ್ಲೆಯಲ್ಲಿ ಕಡಿಮೆ ವೆಚ್ಚದಲ್ಲಿ ಸರ್ಕಾರಿ ಮತ್ತು ಖಾಸಗಿ ವಲಯಗಳ ಭೂಮಿ ಲಭ್ಯತೆ ಇವೆಲ್ಲ ಜಿಲ್ಲೆಯಲ್ಲಿ ಕೈಗಾರಿಕೀಕರಣಕ್ಕೆ ಹೆಚ್ಚುವರಿ ಅವಕಾಶಗಳನ್ನು ಕಲ್ಪಿಸುತ್ತದೆ ಎಂದು ಅವರು ಅಭಿಪ್ರಾಯ ಪಟ್ಟರು.
ಸಮಾರಂಭದಲ್ಲಿ ನಿವೃತ್ತ ಐ.ಜಿ. ಶ್ರೀ ಕೆ.ವಿ.ಮಧುಸೂದನನ್ ನಾಯರ್, ಖ್ಯಾತ ಕೈಗಾರಿಕೋದ್ಯಮಿ ಶ್ರೀ.ಎಂ.ಟಿ.ಪಿ.ಮುಹಮ್ಮದ್ಕುಂಞಿ, ಚಿತ್ರನಟ ಮತ್ತು ವಕೀಲರಾದ ಶ್ರೀ.ಗಂಗಾಧರನ್ ಕುಟ್ಟಮತ್, ಅಕ್ಕರ ಫೌಂಡೇಶನ್ ನಿರ್ದೇಶಕರಾದ ಶ್ರೀಮತಿ. ಫಾತಿಮಾ ಫಜ್ಲೀನ್ ಅವರನ್ನು ಸನ್ಮಾನಿಸಲಾಯಿತು.
ಬಿಲ್ಡಪ್ ಕಾಸರಗೋಡು ಸೊಸೈಟಿಯ ಅಧ್ಯಕ್ಷ ಶ್ರೀ ರವೀಂದ್ರನ್ ಕನ್ನಂಕೈ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಡಾ. ಶೇಖ್ ಬಾವಾ ಅವರು ಸ್ವಾಗತ ಭಾಷಣ ಮಾಡಿದರು. ಶ್ರೀ ಕೆ.ವಿ.ಮಧುಸೂದನನ್ ನಾಯರ್, ಶ್ರೀ.ಎಂ.ಟಿ.ಪಿ.ಮುಹಮ್ಮದ್ ಕುಂಚಿ, ಶ್ರೀ.ಗಂಗಾಧರನ್ ಕುಟ್ಟಮತ್, ಶ್ರೀ.ಅನೂಪ್ ಕಳನಾಡ್, ಡಾ.ರಶ್ಮಿಪ್ರಕಾಶ್, ಶ್ರೀ.ದಯಾಕರ್ ಮಾಡ, ಶ್ರೀ.ಹರೀಸ್ ಕದಿರಿ, ಶ್ರೀಮತಿ ಬಾಲಾಮಣಿ ಟೀಚರ್, ಪ್ರೊ.ಸುಜಾತ, ಶ್ರೀ.ರಫೀಕ್ ಮಾಸ್ತರ್, ಶ್ರೀ ಸಾದಿಕ್ ಮಂಜೇಶ್ವರಂ ಮತ್ತು ಶ್ರೀ ಮುಹಮ್ಮದಲಿ ಫತ್ತಾಹ್ ಉಪಸ್ಥಿತರಿದ್ದರು. ಕೋಶಾಧಿಕಾರಿ ಶ್ರೀಮತಿ. ಸುಲೈಖಾ ಮಾಹಿನ್ ಅತಿಥಿಗಳಿಗೆ ಧನ್ಯವಾದ ಅರ್ಪಿಸಿದರು.
ಅದೇ ದಿನ ಮಧ್ಯಾಹ್ನ 2 ಗಂಟೆಗೆ ಬಿಲ್ಡಪ್ ಕಾಸರಗೋಡು ಸೊಸೈಟಿ ಮತ್ತು ಎಎಸ್ಎಪಿ ಕಮ್ಯುನಿಟಿ ಸ್ಕಿಲ್ ಪಾರ್ಕ್ ಜಂಟಿಯಾಗಿ “ಕಾಸರಗೋಡು ಜಿಲ್ಲೆ ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಅದರ ಪರಿಹಾರ” ಎಂಬ ಚರ್ಚಾಗೋಷ್ಠಿಯೊಂದನ್ನು ನಡೆಸಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.