ಅಬುಧಾಬಿ(ವಿಶ್ವಕನ್ನಡಿಗ ನ್ಯೂಸ್): ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ಜನ್ಮ ದಿನಾಚರಣೆಯ ಪ್ರಯುಕ್ತ, ಎಸ್.ಕೆ.ಎಸ್.ಎಸ್.ಎಫ್ ಅಬುಧಾಬಿ ಕರ್ನಾಟಕ ಸಮಿತಿ ವತಿಯಿಂದ ಬೃಹತ್ ಕರ್ನಾಟಕ ಮೀಲಾದ್ ಕಾನ್ಪ್ ರೆನ್ಸ್ ಮತ್ತು ಮಕ್ಕಳ ಕಲಾ ಸಾಹಿತ್ಯ ಕಾರ್ಯಕ್ರಮದ ಸ್ವಾಗತ ಸಮಿತಿ ರಚನಾ ಸಭೆ ಮೊಯಿದೀನ್ ಕುಟ್ಟಿ ಹಾಜಿ ದಿಬ್ಬ ಇವರ ಪ್ಲಾಟ್ ನಲ್ಲಿ ಇತ್ತೀಚೆಗೆ ನಡೆಯಿತು.
ಎಸ್.ಕೆ.ಎಸ್.ಎಸ್.ಎಫ್ ಅಬುಧಾಬಿ ಕರ್ನಾಟಕ ಸಮಿತಿಯ ಅಧ್ಯಕ್ಷರಾದ ಬಹು ಶಹೀರ್ ಹುದವಿ ಅಧ್ಯಕ್ಷತೆಯಲ್ಲಿ ಹಾಫೀಳ್ ಝೈನ್ ಸಖಾಫಿ ದುವಾ ಮಾಡಿದರು. ಕೆ.ಐ.ಸಿ ವಿದ್ಯಾಸಂಸ್ಥೆಯ ಕೇಂದ್ರ ಸಮಿತಿ ಅಧ್ಯಕ್ಷ ಮೊಯಿದೀನ್ ಕುಟ್ಟಿ ಹಾಜಿ ದಿಬ್ಬ ಕಾರ್ಯಕ್ರಮ ಉದ್ಘಾಟಿಸಿದರು ,ನಂತರ ಹನೀಫ್ ಅರಿಯಮೂಲೆ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು. ದಿನಾಂಕ : 07-10-2023 ಅಬುಧಾಬಿಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಸ್ವಾಗತ ಸಮಿತಿಯನ್ನು ರಚಿಸಲಾಯಿತು.
ಗೌರವಾಧ್ಯಕ್ಷರಾಗಿ ಬಹು ಸಯ್ಯದ್ ಅಸ್ಕರ್ ಅಲಿ ತಂಙಲ್ ,ಸಯ್ಯದ್ ಅಬ್ದುಲ್ ರಹೀಮಾನ್ ತಂಙಲ್, ಮೊಯಿದೀನ್ ಕುಟ್ಟಿ ಹಾಜಿ ದಿಬ್ಬ, ಚೆರ್ಮನ್ ಆಗಿ ಬಹು ಶಹೀರ್ ಹುದವಿ , ವೈಸ್ ಚೇರ್ಮನ್ ಹನೀಫ್ ಅರಿಯಮೂಲೆ, ಕನ್ವೀನರ್ ಹಾಫಿಝ್ ಝೈನ್ ಸಖಾಫಿ, ವೈಸ್ ಕನ್ವೀನರ್ ತ್ವಾಹ ಉಪ್ಪಿನಂಗಡಿ, ಕೋಡಿನೇಟರ್ ಹಸನ್ ದಾರಿಮಿ ಪುತ್ತೂರು, ಕೋಶಾಧಿಕಾರಿ ಹಾಜಿ ಶಾಫಿ ಪೆರುವಾಯಿ ,ವೇದಿಕೆ ಉಸ್ತುವಾರಿ ಅಬೂಬಕ್ಕರ್ ಮುಂಡೋಲೆ ಒಳಗೊಂಡ 55 ಸದಸ್ಯರ ಸ್ವಾಗತ ಸಮಿತಿ ರಚಿಸಲಾಯಿತು .
ಈ ಸಂದರ್ಭದಲ್ಲಿ ಅಬೂಬಕ್ಕರ್ ಸಕಲೇಶಪುರ, ಬಶೀರ್ ಚೆರಂಭಾಣೆ, ಹಿದಾಯತ್ ಮರ್ವೆಲು, ಶಬ್ಬೀರ್ ಕನ್ನಡಿಕಟ್ಟೆ ,ಇಸಾಕ್ ಕೊಡ್ನೀರು ಮೊದಲಾದವರು ಉಪಸ್ಥಿತರಿದ್ದರು. ಯಹ್ಯಾ ಕೊಡ್ಲಿಪೇಟೆ ಸ್ವಾಗತಿಸಿ, ನಾಸೀರ್ ಆತೂರು ಕಾರ್ಯಕ್ರಮ ನಿರೂಪಣೆ ಮಾಡಿ ಕೊನೆಯಲ್ಲಿ ಧನ್ಯವಾದಗೈದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.