ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಮಂಗಳೂರು ಧಕ್ಕೆ ಹಸಿ ಮೀನು ಮಾರಾಟ ಮತ್ತು ಕಮಿಷನ್ ಏಜೆಂಟರ ಸಂಘದ ಮಹಾಸಭೆಯು ಇತ್ತೀಚೆಗೆ ತಾರೀಕು 07.08.2023 ರಂದು ನಗರದ ಬೊಂಬೆ ಲಕ್ಕಿ ರೆಸ್ಟೋರೆಂಟ್ ಹಾಲ್ ನಲ್ಲಿ ಜರುಗಿತು. ಸಂಘದ ಪ್ರಮುಖರಾದ ಕೆ. ಇ.ರಶೀದ್, ಭರತ್ ಭೂಷಣ್ ಮತ್ತು ಕೆ.ಅಶ್ರಫ್ ರವರ ಜಂಟಿ ನೇತ್ರತ್ಞ ದಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮಾಜಿ ಮೇಯರ್ ಕೆ.ಅಶ್ರಫ್, ಮಾಲಕರು ಕೆ. ಇ. ಎ ಫಿಷರೀಷ್ ಮಂಗಳೂರು ರವರು ಆಯ್ಕೆಯಾಗಿದ್ದಾರೆ.
ಸಂಘದ ಉಪಾಧ್ಯಕ್ಷರಾಗಿ ಎಸ್. ಎ.ಅಮೀನ್ ,ಗೌರವ ಅಧ್ಯಕ್ಷರಾಗಿ ಭರತ್ ಭೂಷಣ್,ಕಾರ್ಯಾಧ್ಯಕ್ಷರಾಗಿ ಕೆ. ಇ.ರಶೀದ್, ಕೋಶಾಧಿಕಾರಿಯಾಗಿ ಎ.ಕೆ.ಹನೀಫ್,ಪ್ರಧಾನ ಕಾರ್ಯದರ್ಶಿಯಾಗಿ ಕೆ.ಎಂ.ಇಬ್ರಾಹಿಮ್,ಜಂಟಿ ಕಾರ್ಯದರ್ಶಿಯಾಗಿ ಜೆ.ಬಿ ಶಿವ,ಕಾರ್ಯಕಾರಿ ಸಮಿತಿ ಸದಸ್ಯರಾಗಿ ಟಿ. ಎಚ್.ಹಮೀದ್ ಕೆ.ಬಿ. ಎಸ್. ಸಾಲಿಹ್, ಕೆ.ಎಂ. ಎ. ಮುಸ್ತಾಫಾ ಮತ್ತು ಕೆ. ಎ.ಬಿ.ಬಾವಾ ರವರನ್ನು ಆಯ್ಕೆ ಮಾಡಲಾಯಿತು.
ಕಾರ್ಯದರ್ಶಿ ಮಂಗಳೂರು ಧಕ್ಕೆ ಹಸಿ ಮೀನು ಮಾರಾಟ ಮತ್ತು ಕಮಿಷನ್ ಏಜೆಂಟರ ಸಂಘ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.