ಉಕ್ಕುಡ(ವಿಶ್ವಕನ್ನಡಿಗ ನ್ಯೂಸ್): ಖಿದ್ಮತುಲ್ ಇಸ್ಲಾಮ್ ಅಸೋಸಿಯೇಶನ್ ಉಕ್ಕುಡ ಕಿನ್ಯ ಇದರ ನೂತನ ಕಚೇರಿ ಉದ್ಘಾಟನಾ ಸಮಾರಂಭ ಹಾಗೂ ಸನ್ಮಾನ ಕಾರ್ಯಕ್ರಮ ಹಾಗೂ ಮಾದಕ ದ್ರವ್ಯದ ದುಸ್ಪರಿಣಾಮದ ಬಗ್ಗೆ ಜಾಗೃತಿ ಕಾರ್ಯಕ್ರಮ ಮರ್ಹೂಮ್ ಕೆ.ಬಿ ಇಬ್ರಾಹಿಮ್ ವೇದಿಕೆ ಉಕ್ಕುಡದಲ್ಲಿ ಶುಕ್ರವಾರ ನಡೆಯಿತು.
ಕರ್ನಾಟಕ ಸರಕಾರದ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ನೂತನ ಕಚೇರಿಯನ್ನು ಉದ್ಘಾಟಿಸಿದರು. ಸಯ್ಯದ್ ಅಮೀರ್ ತಂಙಳ್ ಕಿನ್ಯ ಮಾರ್ಗದರ್ಶನದಲ್ಲಿ ನಡೆಯಿತು. ಸಯ್ಯದ್ ಬಾತಿಷ್ ತಂಙಳ್ ಆನೆಕಲ್ಲು ದುಆ ನೆರವೇರಿಸಿದರು.
ಉಳ್ಳಾಲ ಪೋಲೀಸ್ ಠಾಣಾ ನಿರೀಕ್ಷಕರಾದ ಸಂದೀಪ್ ಜಿ.ಎಸ್ ಡ್ಗಗ್ಸ್ .ಮುಕ್ತ ಕಿನ್ಯ ಗ್ರಾಮ ಬಿತ್ತಿ ಪತ್ರ ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಅವರು ಡ್ರಗ್ಸ್ ಸೇವಿಸುವರಲ್ಲಿ ಓದುವುದರಲ್ಲಿ ಆಶಕ್ತಿ ಇಲ್ಲದಿರುವುದು, ಅತಿಯಾದ ನಿದ್ರಾಹೀನತೆ ಇಂತಹ ಲಕ್ಷಣಗಳು ಕಂಡು ಬರುತ್ತದೆ, ಇಂತಹ ಲಕ್ಷಣ ಕಂಡು ಬಂದಾಗ ಪೋಷಕರು ಮಕ್ಕಳ ಮೇಲೆ ನಿಗಾವಹಿಸಬೇಕು, ಅವರ ಚಲನವಲನಗಳ ಬಗ್ಗೆಯೂ ನಿಗಾವಹಿಸಬೇಕು. ಡ್ರಗ್ಸ್ ಚಟುವಟಿಕೆ ಎಲ್ಲೆಲ್ಲಿ ನಡೆಯುತ್ತದೆ ಎಂದು ನಿಮಗೆ ತಿಳಿದು ಬಂದರೆ ನಮಗೆ ನೀವು ನೇರವಾಗಿ ಮಾಹಿತಿ ನೀಡಿ, ಎಲ್ಲಿಯೂನಿಮ್ಮ ಹೆಸರು ಬಹಿರಂಗ ಪಡಿಸುವುದಿಲ್ಲ ಎಂದರು.
ಕಿನ್ಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ತುಳಸಿ ಮಾತನಾಡಿ ಇಂದು ಡ್ರಗ್ಸ್ ಬಗ್ಗೆ ಸಾಮಾಜಿಕ ಜಾಲತಾಣಲ್ಲಿ ಕಾಣಬಹುದು, ಮುಂದೊಂದು ದಿನ ನಮ್ಮ ಮನೆಯ ಮಕ್ಕಳು ಈ ವ್ಯಸನಕ್ಕೆ ದಾಸರಾಗಬಹುದು, ಆದ್ದರಿಂದ ಕಿದ್ಮತುಲ್ ಇಸ್ಲಾಮ್ ಅಸೋಸಿಯೇಶನ್ ಅವರ ಮಾದಕ ವ್ಯಸನದ ವಿರುದ್ಧ ಜಾಗೃತಿ ಅಭಿಯಾನ ಕಾರ್ಯಕ್ರಮ ಶ್ಲಾಘನೀಯ ಎಂದರು.
ಕಿದ್ಮತುಲ್ ಇಸ್ಲಾಮ್ ಅಸೋಸಿಯೇಶನ್ ಕಾರ್ಯದರ್ಶಿ ಫಾರೂಕ್ ಕಿನ್ಯ ಪ್ರಾಸ್ತವಿಕವಾಗಿ ಮಾತನಾಡಿ ಜೀವನದಲ್ಲಿ ನಾವೆಂದೂ ಮಾದಕ ದ್ತವ್ಯಗಳನ್ನು ಮುಟ್ಟಬಾರದು ಎಂದು ಪ್ರತಿಜ್ಞಾ ವಿಧಿ ಬೋಧಿಸಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ಸರಕಾರದ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್, ಸಮಾಜ ಸೇವಕರಾದ ಇಬ್ರಾಹಿಮ್ ಹಾಜಿ ಕತಾರ್, ಮಜೀದ್ ಹಾಜಿ, ಇಬ್ರಾಹಿಮ್ ಬಾತಿಶ್ ಝುಅರಿ, ಆಶೀಫ್ ಲೋನಾವಾಲಾ, ಕೆ.ಬಿ ಅಬ್ಬಾಸ್, ಅಬೂ ಸ್ವಾಲಿಹ್ ಹಾಜಿ ಕುರಿಯಕ್ಕಾರ್ ಇವರನ್ನು ಸನ್ಮಾನಿಸಲಾಯಿತು.
ಕಿದ್ಮತುಲ್ ಇಸ್ಲಾಮ್ ಅಸೋಸಿಯೇಶನ್ ಇದರ ಅಧ್ಯಕ್ಷ ಕೆ.ಬಿ ಅಬ್ಬಾಸ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದರು. ಸಯ್ಯದ್ ಶಿಹಾಬ್ ತಂಙಳ್ ಕಿನ್ಯ, ಕೇಂದ್ರ ಕಿನ್ಯ ಜುಮಾ ಮಸೀದಿ ಮುದರ್ರಿಸ್ ಅಬ್ದುಲ್ ಮಜೀದ್ ದಾರಿಮಿ, ಉಕ್ಕುಡ ರಿಫಾಯಿಯ್ಯ ಜುಮಾ ಮಸೀದಿ ಖತೀಬರಾದ ಇಬ್ರಾಹಿಮ್ ದಾರಿಮಿ, ಕಿದ್ಮತುಲ್ ಇಸ್ಲಾಮ್ ಅಸೋಸಿಯೇಶನ್ ಅವರ ಸ್ಥಾಪಕ ಗೌರವಾಧ್ಯಕ್ಷ ಇಬ್ರಾಹಿಮ್ ಬಾತಿಶ್ ಝುಅರಿ, ಕಿನ್ಯ ವಾದಿತ್ವೈಬ ಶಂಶುಲ್ ಉಲಮಾ ದಾರುಸ್ಸಲಾಮ್ ಅಕಾಡೆಮಿಯ ಮೆನೇಜರ್ ಹುಸೈನ್ ದಾರಿಮಿ ರೆಂಜಲಾಡಿ, ದ.ಕ ಜಿಲ್ಲಾ ಎಸ್.ವೈ.ಎಸ್ ವೆಸ್ಟ್ ಸಂಘಟನಾ ಕಾರ್ಯದರ್ಶಿ ಮಹಬೂಬ್ ಸಖಾಫಿ ಕಿನ್ಯ, ದ.ಕ ಜಿಲ್ಲಾ ಮದ್ರಸ ಮೇನೇಜ್ ಮೆಂಟ್ ಕಮಿಟಿ ಉಪಾಧ್ಯಕ್ಷ ಅಬೂಸ್ವಾಲಿಹ್ ಹಾಜಿ ಕುರಿಯಕ್ಕಾರ್, ಕೋಶಾಧಿಕಾರಿ ಕೆ.ಎಂ ಮೊಯಿದಿನ್ ಕುಂಞಿ, ಕಿನ್ಯ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ, ಉಕ್ಕುಡ ರಿಫಾಯಿಯ್ಯ ಜುಮಾ ಮಸೀದಿ ಅಧ್ಯಕ್ಷ ಪಿ.ಎಮ್ ಅಬ್ದರ್ರಹ್ಮಾನ್ ಹಾಜಿ, ಉಪಾಧ್ಯಕ್ಷ ಹಸೈನಾರ್ ಹಾಜಿ, ಮಾಜಿ ಅಧ್ಯಕ್ಷ ಯೂಸುಫ್ ಮಜಲ್, ಕಿದ್ಮತುಲ್ ಇಸ್ಲಾಮ್ ಅಸೋಸಿಯೇಶನ್ ಉಪಾಧ್ಯಕ್ಷ ಪಿ.ಎಮ್.ಸಲೀಮ್, ಕಾರ್ಯದರ್ಶಿ ನಸೀರ್ ಪಿ.ಎಮ್, ಕೋಶಾಧಿಕಾರಿ ಬಶೀರ್ ಮಾಳಿಗೆ, ಉಕ್ಕುಡ ತಾಜುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಅಧ್ಯಕ್ಷ ಎ.ಪಿ.ಹಸನಾಕ, ಕಿನ್ಯ ಗ್ರಾಮ ಪಂಚಾಯತ್ ಸದಸ್ಯರಾದ ಸಿರಾಜ್ ಕಿನ್ಯ, ಫಯಾಝ್, ಮಾಜಿ ಸದಸ್ಯ ಹಮೀದ್, ಪ.ಕಾರ್ಯದರ್ಶಿ ಸಾಲಿನಿ, ಉಕ್ಕುಡ ಶ.ಶುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಅಧ್ಯಕ್ಷ ಪಿ.ಐ ಅಹ್ಮದ್, ಕಿನ್ಯ ಕುತುಬಿಯ್ಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮುಹಮ್ಮದ್ ರಹ್ಮತ್ ನಗರ, ಶಂಶುಲ್ ಉಲಮಾ ದಾರುಸ್ಸಲಾಮ್ ಅಕಾಡೆಮಿ ವಾದಿತ್ವೈಬ ಪ್ರಧಾನ ಕಾರ್ಯದರ್ಶಿ ಸಿರಾಜ್ ಅಲಂಕಾರ್,ಉಕ್ಕುಡ ರಿಫಾಯಿಯ್ಯ ಜುಮಾ ಮಸೀದಿ ಉಪಾಧ್ಯಕ್ಷ ಅಬ್ದುಲ್ಲಾ .ಕೆ, ಕಿನ್ಯ ಅಲ್ ಅಮೀನ್ ಚಾರಿಟೇಬಲ್ ಟ್ರಸ್ಟ್ಅಧ್ಯಕ್ಷ ಕೆ.ಪಿ ಅಬ್ಬಾಸ್, ಉದ್ಯಮಿ ಖಾಸಿಮ್ ಮಂಜನಾಡಿ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.